ಈ ಐವರು ಪೊಲೀಸರು ಬ್ಲಾಕ್​ ಅಂಡ್​ ವೈಟ್​ ದಂಧೆ ನಡೆಸುತ್ತಿದ್ದು, ನ.22ರಂದು ಉದ್ಯಮಿಯೊಬ್ಬನನ್ನು ಬೆದರಿಸಿ 35 ಲಕ್ಷ ರೂ. ಸುಲಿಗೆ ಮಾಡಿದ್ದರು.

ಬೆಂಗಳೂರು(ಡಿ.6): ಸಾರ್ವಜನಿಕರನ್ನು ರಕ್ಷಿಸಬೇಕಾದ ಆರಕ್ಷಕರೆ ಭಕ್ಷಕರಾದ ಘಟನೆ ಈಗ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಉದ್ಯಮಿಯೊಬ್ಬರಿಂದ 35 ಲಕ್ಷ ರೂ. ಸುಲಿಗೆ ಮಾಡಿದ ಆರೋಪದ ಮೇಲೆ ಒರ್ವ ಎಸ್ಐ ಹಾಗೂ ನಾಲ್ವರು ಪೇದೆಗಳನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಎಸ್​ಐ ಮಲ್ಲಿಕಾರ್ಜುನ್​, ಪೇದೆಗಳಾದ ಗಿರೀಶ್​, ಮಂಜುನಾಥ್​, ಚಂದ್ರಶೇಖರ್​, ಅನಂತರಾಜು ಬಂಧಿತರು.

ಈ ಐವರು ಪೊಲೀಸರು ಬ್ಲಾಕ್​ ಅಂಡ್​ ವೈಟ್​ ದಂಧೆ ನಡೆಸುತ್ತಿದ್ದು, ನ.22ರಂದು ಉದ್ಯಮಿಯೊಬ್ಬನನ್ನು ಬೆದರಿಸಿ 35 ಲಕ್ಷ ರೂ. ಸುಲಿಗೆ ಮಾಡಿದ್ದರು. ಪೊಲೀಸರಿಗೆ ಸಹಕರಿಸಿದ್ದ ಜಾಫರ್​ ಮತ್ತು ಭಾಸ್ಕರ್​ ಕೂಡ ಬಂಧಿಸಲಾಗಿದ್ದು, ಇವರಿಂದ 16 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ನೊಂದ ಉದ್ಯಮಿ ದೂರು ನೀಡಿದ ಹಿನ್ನಲೆಯಲ್ಲಿ ಸೆರೆ ಹಿಡಿಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು ನಂತರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಪೊಲೀಸರೆ ರಾಬರಿಗಿಳಿದಿರುವ ಪ್ರಕರಣಗಳಲ್ಲಿ ಇದು ಮೂರನೆಯದಾಗಿದ್ದು, ಈ ಮೊದಲು ಗಿರಿನಗರ ಠಾಣೆಯ ಪೊಲೀಸರು ಈ ರೀ ಕೃತ್ಯವೆಸಗಿದ್ದರು.