ದೆಹಲಿ ಸೇರಿದಂತೆ 22 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲಾಲೂ ಪ್ರಸಾದ್ ವಿರುದ್ಧ ಭೂ ಕಬಳಿಕೆ, ಬೇನಾಮಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ದೆಹಲಿ, ಗುರುಗ್ರಾಮ್ ಸೇರಿದಂತೆ ಹಲವೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ನವದೆಹಲಿ (ಮೇ.16): ಆರ್’ಜೆಡಿ ಮುಖ್ಯಸ್ಥ, ಮಾಜಿ ಬಿಹಾರ ಸಿಎಂ ಲಾಲೂ ಪ್ರಸಾದ್ ಯಾದವ್’ಗೆ ಸೇರಿದ ಆಸ್ತಿಗಳ ಮೇಲೆ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದೆಹಲಿ ಸೇರಿದಂತೆ 22 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲಾಲೂ ಪ್ರಸಾದ್ ವಿರುದ್ಧ ಭೂ ಕಬಳಿಕೆ, ಬೇನಾಮಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ದೆಹಲಿ, ಗುರುಗ್ರಾಮ್ ಸೇರಿದಂತೆ ಹಲವೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಅಧಿಕಾರಿಗಳು ಲಾಲೂಗೆ ಸೇರಿದ ಆಸ್ತಿ ಪತ್ರ ಹಾಗೂ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ದಾಳಿಯಿಂದ ಲಾಲೂ ಪ್ರಸಾದ್ ಯಾದವ್’ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
