ರಾಜ್ಯ​ದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾ​ರಿ​ಕೆಗಳ ಉತ್ತೇ​ಜ​ನ​ಕ್ಕಾಗಿ ಸದ್ಯ​ದ​ಲ್ಲಿಯೇ ಹೂಡಿ​ಕೆ​ದಾ​ರರ ಸಮಾ​ವೇಶ ಮಾಡಲಾ​ಗು​ವುದು ಎಂದು ಬೃಹತ್‌, ಮಧ್ಯಮ ಕೈಗಾ​ರಿಕೆ ಹಾಗೂ ಮೂಲ​ಭೂತ ಸೌಕರ್ಯಗಳ ಸಚಿವ ಆರ್‌.ವಿ.ದೇಶ​ಪಾಂಡೆ ಹೇಳಿ​ದ್ದಾರೆ.

ಧಾರ​ವಾಡ: ರಾಜ್ಯ​ದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾ​ರಿ​ಕೆಗಳ ಉತ್ತೇ​ಜ​ನ​ಕ್ಕಾಗಿ ಸದ್ಯ​ದ​ಲ್ಲಿಯೇ ಹೂಡಿ​ಕೆ​ದಾ​ರರ ಸಮಾ​ವೇಶ ಮಾಡಲಾ​ಗು​ವುದು ಎಂದು ಬೃಹತ್‌, ಮಧ್ಯಮ ಕೈಗಾ​ರಿಕೆ ಹಾಗೂ ಮೂಲ​ಭೂತ ಸೌಕರ್ಯಗಳ ಸಚಿವ ಆರ್‌.ವಿ.ದೇಶ​ಪಾಂಡೆ ಹೇಳಿ​ದ್ದಾರೆ.

ಈಗಾ​ಗಲೇ ಜಾಗ​ತಿಕ ಹೂಡಿ​ಕೆ​ದಾ​ರರ ಸಮಾ​ವೇಶ ನಡೆ​ಸಿದ್ದು, ಯಶ​ಸ್ವಿ​ಯಾ​ಗಿದೆ. ಅದರ ಫಲ​ವಾಗಿ ತುಮ​ಕೂರು, ಮೈಸೂರು, ಕಲ​ಬುರಗಿ, ಯಾದ​ಗಿರಿ, ಧಾರ​ವಾ​ಡ ಸೇರಿ​ದಂತೆ ರಾಜ್ಯದ ವಿವಿ​ಧೆಡೆ ಕೈಗಾ​ರಿಕಾ ಕಂಪ​ನಿ​ಗಳು ಬರು​ತ್ತಿವೆ. ಮುಂದಿನ ಅಕ್ಟೋ​ಬರ್‌ ಅಥವಾ ನವೆಂಬರ್‌ನಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾ​ರಿ​ಕೆ​ಗಳ ನಿರ್ಮಾ​ಣಕ್ಕೆ ಹೂಡಿಕೆದಾರರ ಸಮಾ​ವೇ​ಶದ ಸಿದ್ಧತೆ ನಡೆ​ಸು​ತ್ತಿ​ದ್ದೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು.