ಕುವೆಂಪುರವರು 'ಮನುಜಮತ ವಿಶ್ವಪಥ' ಸಂದೇಶ ಸಾರಿದ್ದರು. ನನ್ನ ತಂದೆ ಲಂಕೇಶ್ "ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ"ಎಂಬ ಸಾರ್ವಕಾಲಿಕ ಶ್ರೇಷ್ಠ ಎಂದು ಹೇಳಿದ್ದರು.

ಮಂಗಳೂರು(ಜ.09): ಕೋಮುದ್ವೇಷದಿಂದ ಹತ್ಯೆಯಾದ ದೀಪಕ್ ರಾವ್ ಹಾಗೂ ಅಹಮದ್ ಬಶೀರ್ ಅವರ ಮನೆಗಳಿಗೆ ಪತ್ರಕರ್ತ ಹಾಗೂ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಭೇಟಿ ನೀಡಿ ಸಾಂತ್ವನ ಹೇಳಿ ಎರಡೂ ಕುಟುಂಬಗಳಿಗೂ ತಲಾ 25 ಸಾವಿರ ರೂ. ಚೆಕ್ ವಿತರಿಸಿದರು.

Add Asianetnews Kannada as a Preferred SourcegooglePreferred

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುವೆಂಪುರವರು 'ಮನುಜಮತ ವಿಶ್ವಪಥ' ಸಂದೇಶ ಸಾರಿದ್ದರು. ನನ್ನ ತಂದೆ ಲಂಕೇಶ್ "ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ"ಎಂಬ ಸಾರ್ವಕಾಲಿಕ ಶ್ರೇಷ್ಠ ಎಂದು ಹೇಳಿದ್ದರು. ಇವೆಲ್ಲವೂ ಜಾತಿ ಧರ್ಮಗಳಿಗಿಂತ ಮನುಕುಲ ಮುಖ್ಯ ಎಂಬುದನ್ನು ಒತ್ತಿ ಹೇಳಿದ್ದವು. ಆದರೆ ಈ ಸರ್ಕಾರ ಜಾತಿಗೆ ಜಾತಿ ಮತ್ತು ಧರ್ಮಕ್ಕೆ ಧರ್ಮವನ್ನು ಎತ್ತಿಕಟ್ಟಿ ಅಮಾಯಕರ ಹತ್ಯೆ ಮಾಡುತ್ತಿದೆ. ಗೌರಿ ಸತ್ತು ನಾಲ್ಕು ತಿಂಗಳಾಯಿತು.ಸರ್ಕಾರ ಏನು ಮಾಡುತ್ತಿದೆ? ಇನ್ನೆಷ್ಟು ಗೌರಿ, ದೀಪಕ್, ಬಷೀರ್...ರ ಕೊಲೆಗಳಿಗಾಗಿ ಕಾಯುತ್ತಿದ್ದೀರಾ ಸಿದ್ದರಾಮಯ್ಯನವರೆ?ಇನ್ನೆಷ್ಟು ಕೋಮು ಗಲಭೆ ನಡೆಸಬೇಕಿಂದಿದ್ದೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.