ಇಂದಿರಾ ಕ್ಯಾಂಟೀನ್ ಆಗಲಿದೆ ಹೈಟೆಕ್ ಕ್ಯಾಂಟೀನ್; ಮೆನುವಿನಲ್ಲಿ ಆಗಲಿದೆ ಬದಲಾವಣೆ
ರಾಜಧಾನಿ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಸರ್ಕಾರ ಹೊಸ ತಂತ್ರ ರೂಪಿಸಿದೆ.
ಬೆಂಗಳೂರು (ಫೆ.26): ರಾಜಧಾನಿ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಸರ್ಕಾರ ಹೊಸ ತಂತ್ರ ರೂಪಿಸಿದೆ.
ಮಾರ್ಚ್ 1 ರಿಂದ ಇಂದಿರಾ ಕ್ಯಾಂಟಿನ್ ಮೆನು ಬದಲಾವಣೆಯಾಗಲಿದೆ. ಹೈಟೆಕ್ ಊಟ, ಉಪಹಾರ ನೀಡಲು ಸರ್ಕಾರ ಮುಂದಾಗಿದೆ. ಅನ್ನ ಸಾಂಬಾರ್ ಮೊಸರನ್ನಗೆ ಸೀಮಿತವಾಗಿದ್ದ ಕ್ಯಾಂಟೀನ್’ನಲ್ಲಿ ಪಾಯಸ, ವೈರೈಟಿ ಇಡ್ಲಿ, ಸೇರಿದಂತೆ ಉತ್ತರ ಭಾರತದ ತಿನಿಸು ನೀಡಲಿದ್ದಾರೆ.
ದರ್ಶಿನಿಯಂತಹ ಹೋಟೆಲ್’ನಲ್ಲಿ ಸಿಗುವ ತಿಂಡಿಗಳು ಇಂದಿರಾ ಕ್ಯಾಂಟಿನ್’ನಲ್ಲಿ ಲಭ್ಯವಾಗಲಿದೆ. ಕಡಿಮೆ ದರದಲ್ಲಿ ಹೆಚ್ಚು ವೆರೈಟಿ ತಿಂಡಿ ನೀಡಿ ಗ್ರಾಹಕರ ಸೆಳೆಯಲು ಸರ್ಕಾರ ಚುನಾವಣಾ ತಂತ್ರ ಮಾಡಿದೆ.
ವೆರೖಟಿ ತಿಂಡಿ ಜಾಸ್ತಿ ನೀಡುವುದರಿಂದ ಖರ್ಚು ಹೆಚ್ಚಳವಾಗಲಿದ್ದು ಆ ವೆಚ್ಚವನ್ನು ತೆರಿಗೆದಾರರ ಮೇಲೆ ಹಾಕಲು ಪಾಲಿಕೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಸಾಲದ ಸುಳಿಯಲ್ಲಿರುವ ಪಾಲಿಕೆಯಿಂದ ಕ್ಯಾಂಟಿನ್’ಗಾಗಿ ಮತ್ತಷ್ಟು ಸಾಲ ಮಾಡುವ ಸಾಧ್ಯತೆ.