ಛತ್ತೀಸ್‌'ಗಡದ ನಕ್ಸಲ್ ಪೀಡಿತ ಬಸ್ತರ್ ಜಿಲ್ಲೆಯ ವಿವಿಧ ಪ್ರದೇಶಗಳ ಕುರಿತಾಗಿನ ವರದಿಗಾಗಿ ಈ ಪ್ರಶಸ್ತಿ ಒಲಿದಿದೆ. ಮಾಲಿನಿ ಸುಬ್ರಮಣಿಯಂ ಜತೆ ವಿಶ್ವದ ಇತರ ಮೂವರು ಪತ್ರಕರ್ತರೂ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ನ್ಯೂಯಾರ್ಕ್(ನ.23): ಸ್ವತಂತ್ರ ಮಾಧ್ಯಮಕ್ಕೆ ಒತ್ತು ನೀಡುವ ಪತ್ರಕರ್ತರಿಗೆ ನೀಡಲಾಗುವ ‘ಅಂತಾರಾಷ್ಟ್ರೀಯ ಪತ್ರಿಕಾ ಸ್ವಾತಂತ್ರ್ಯ’ ಪ್ರಶಸ್ತಿಗೆ ಭಾರತದ ಪತ್ರಕರ್ತೆ ಮಾಲಿನಿ ಸುಬ್ರಮಣಿಯಂ ಅವರು ಭಾಜನರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಛತ್ತೀಸ್‌'ಗಡದ ನಕ್ಸಲ್ ಪೀಡಿತ ಬಸ್ತರ್ ಜಿಲ್ಲೆಯ ವಿವಿಧ ಪ್ರದೇಶಗಳ ಕುರಿತಾಗಿನ ವರದಿಗಾಗಿ ಈ ಪ್ರಶಸ್ತಿ ಒಲಿದಿದೆ. ಮಾಲಿನಿ ಸುಬ್ರಮಣಿಯಂ ಜತೆ ವಿಶ್ವದ ಇತರ ಮೂವರು ಪತ್ರಕರ್ತರೂ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ನಕ್ಸಲ್ ಪೀಡಿತ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಪೊಲೀಸರ ದೌರ್ಜನ್ಯ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅಪ್ರಾಪ್ತರ ಬಂಧನ, ಶಾಲೆಗಳ ಸ್ಥಗಿತ, ಕಾನೂನು ರಹಿತವಾಗಿ ಸಾರ್ವಜನಿಕರ ಹತ್ಯೆ ಮತ್ತು ಪತ್ರಕರ್ತರಿಗೆ ಬೆದರಿಕೆಯಂಥ ಘಟನೆಗಳ ಮಾಲಿನಿ ಸುಬ್ರಮಣಿಯಂ ವರದಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಅಂತಾರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದು ಪತ್ರಕರ್ತರ ರಕ್ಷಣಾ ಸಮಿತಿ ಹೇಳಿದೆ.