ನವದೆಹಲಿ(ಸೆ.27):ಉರಿ ಸೇನಾ ಶಿಬಿರದ ಮೇಲಿನ ಉಗ್ರರ ದಾಳಿಯ ಹಿಂದೆ ತನ್ನ ಕೈವಾಡ ಇಲ್ಲ ಎಂದು ಪಾಕಿಸ್ತಾನ ಬೊಬ್ಬೆ ಹೊಡೆದು ಭಾರತದ ಮೇಲೆಯೇ ಗೂಬೆ ಕೂರಿಸುತ್ತಿರುವ ನಡುವೆಯೇ ಭಾರತದಲ್ಲಿರುವ ಪಾಕ್ ರಾಯಭಾರಿ ಅಬ್ದುಲ್ ಬಸಿತ್ ಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರು ಸಮನ್ಸ್ ನೀಡಿದ್ದಾರೆ. ಉರಿ ಭಯೋತ್ಪಾದನೆ ದಾಳಿಗೆ ಸಂಬಂಧಿಸಿದಂತೆ ಪಾಕ್ ಮೂಲದ ಉಗ್ರರ ಕೈವಾಡದ ಬಗ್ಗೆ ಸೂಕ್ತ ಪುರಾವೆಯನ್ನು ಒದಗಿಸಿದೆ. ಅಬ್ದುಲ್ ಬಾಸಿತ್ ಗೆ ಜೈಶಂಕರ್ ಅವರು ಉತ್ತರಿಸುವಂತೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಅಲ್ಲದೇ ಉಗ್ರರು ಒಳನುಸುಳಲು ನೆರವು ನೀಡಿದ್ದ ಪಿಓಕೆಯ ಇಬ್ಬರನ್ನು ಸ್ಥಳೀಯರು ಬಂಧಿಸಿದ್ದರು. ಅವರೀಗ ಪೊಲೀಸ್ ವಶದಲ್ಲಿರುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred