Asianet Suvarna News Asianet Suvarna News

ಅವಕಾಶವಿದ್ದರೆ ಕಾಶ್ಮೀರಿಗಳು ಪ್ರತ್ಯೇಕವಾಗಲು ಬಯಸುತ್ತಾರೆ : ಕಾಂಗ್ರೆಸ್ ಮುಖಂಡ

ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಕೇಂದ್ರ ಸಚಿವ ಸೈಫುದ್ದಿನ್ ಸೋಜ್ ಕಾಶ್ಮೀರದ ವಿಚಾರವಾಗಿ ನೀಡಿದ ಹೇಳಿಕೆಯೊಂದು ಇದೀಗ ವಿವಾದಕ್ಕೆ ಈಡಾಗಿದೆ.  

If given a choice, Kashmiri people would want independence: Cong veteran Saifuddin

ನವದೆಹಲಿ : ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಕೇಂದ್ರ ಸಚಿವ ಸೈಫುದ್ದಿನ್ ಸೋಜ್ ಕಾಶ್ಮೀರದ ವಿಚಾರವಾಗಿ ನೀಡಿದ ಹೇಳಿಕೆಯೊಂದು ಇದೀಗ ವಿವಾದಕ್ಕೆ ಈಡಾಗಿದೆ.  

ಕಾಶ್ಮೀರಿಗಳು ಪಾಕಿಸ್ತಾನದೊಂದಿಗೆ ಸೇರಲು ಬಯಸುವುದಿಲ್ಲ. ಅವರ ಮೊದಲ ಆದ್ಯತೆ ಸ್ವತಂತ್ರವಾಗುವುದು ಎಂದು ಈ ಹಿಂದೆ ಮುಷರಫ್ ಹೇಳಿದ್ದ ಹೇಳಿಕೆಯನ್ನೇ ಅವರು ಸಮರ್ಥನೆ ಮಾಡಿಕೊಂಡಿದ್ದಾರೆ. 

ಈಗ ಅದೇ ರೀತಿ ಹೇಳಿಕೆ ನೀಡಿದ  ಮಾಜಿ ಸಚಿವರೂ ಹಾಗೂ ಕಾಂಗ್ರೆಸ್ ಮುಖಂಡರೂ ಆದ ಸೈಫುದ್ದಿನ್  ಕಾಶ್ಮೀರಿಗಳಿಗೆ  ಅವಕಾಶ ಕೊಟ್ಟರೆ ಅವರು ಸ್ವತಂತ್ರರಾಗಲು ಬಯಸುತ್ತಾರೆ ಎಂದು ಹೇಳಿದ್ದಾರೆ.  

2007ರಲ್ಲಿ ಮುಷರಫ್ ಈ ಹೇಳಿಕೆ ನೀಡಿದ್ದರು. ಅಂದಿನ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಇಸ್ಲಮಬಾದ್ ಶೃಂಗ ಸಭೆಗಾಗಿ ಭೇಟಿ ನೀಡಲು ನಿರ್ಣಯಿಸಿದ್ದ ವೇಳೆ ಇಂತಹ ಹೇಳಿಕೆ ನೀಡಿದ್ದರು. ಇದೀಗ ಕಾಂಗ್ರೆಸ್ ಹಿರಿಯ ಮುಖಂಡ ಅಂತಹದ್ದೇ ಹೇಳಿಕೆ ನೀಡಿರುವುದು ವಿವಾದಕ್ಕೆ ಈಡಾಗಿದೆ. 

Follow Us:
Download App:
  • android
  • ios