Asianet Suvarna News Asianet Suvarna News

ಬಿಜೆಪಿ ನೀಡಿದ ಆಹ್ವಾನ ತಿರಸ್ಕರಿಸಿದ್ದೇನೆ : ಕಾಂಗ್ರೆಸ್ ಮುಖಂಡ

ಕಾಂಗ್ರೆಸ್- ಬಿಜೆಪಿ ಪಕ್ಷದವರು ಒಂದೇ ಕಡೆಗೆ ಸೇರಬಾರದು ಎಂಬ ನಿಯಮ ಏನಾದರೂ ಇದೆಯಾ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ಪ್ರಶ್ನಿಸಿದ್ದಾರೆ. ಅಲ್ಲದೇ ನನಗೂ ಹಿಂದೆ ಬಿಜೆಪಿಯಿಂದ ಆಹ್ವಾನ ಬಂದಿತ್ತು. ನಾನು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. 

I'm Not Join To BJP  Says MB Patil
Author
Bengaluru, First Published Sep 12, 2018, 9:22 AM IST

ವಿಜಯಪುರ: ಜಾರಕಿಹೊಳಿ ಹಾಗೂ ಶ್ರೀರಾಮುಲು ಒಂದೇ ಸಮಾಜಕ್ಕೆ ಸೇರಿದವರು. ಸಮಾಜದ ಹಿತದೃಷ್ಟಿ ಯಿಂದ ಅವರು ಒಂದೇ ಕಡೆ ಸೇರಿರಬಹುದು. 

ಕಾಂಗ್ರೆಸ್- ಬಿಜೆಪಿ ಪಕ್ಷದವರು ಒಂದೇ ಕಡೆಗೆ ಸೇರಬಾರದು ಎಂಬ ನಿಯಮ ಏನಾದರೂ ಇದೆಯಾ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿ ಯೂರಪ್ಪ ಹಾಗೂ ನಾನು ಈ ಹಿಂದೆ ಒಂದೇ ವಿಮಾನ ದಲ್ಲಿ ಪ್ರಯಾಣ ಮಾಡಿದ್ದೇವೆ. 

ಹಾಗೆಂದ ಮಾತ್ರಕ್ಕೆ ನಮ್ಮಿಬ್ಬರ ನಡುವೆ ಏನಾದರೂ ಇದೆಯಾ? ಬಿಜೆಪಿ ಯವರು ತನಗೆ ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದನ್ನು ವಿನಮ್ರದಿಂದ ತಿರಸ್ಕರಿಸುತ್ತೇನೆ. ನಾನು ಬಿಜೆಪಿ ಸೇರುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

Follow Us:
Download App:
  • android
  • ios