Asianet Suvarna News Asianet Suvarna News

ಹೆಂಡ್ತಿ ಬೇಡ ಅಂತಾ ಗಂಡನಿಂದ ವಟ ಸಾವಿತ್ರಿ ಪೂಜೆ!

ಪತ್ನಿ ಪೀಡಿತನಿಂದ ಅತ್ತಿ ಗಿಡಕ್ಕೆ ಪೂಜೆ
ಪತ್ನಿ ಪೀಡಿತನಿಂದ ವಟ ಸಾವಿತ್ರಿ ವ್ರತ
ಏಳೇಳು ಜನ್ಮಕ್ಕೂ ಬೇಡವಂತೆ ಇಂಥ ಹೆಂಡತಿ
ಹರಕೆ ಹೊತ್ತ ಚಿಕ್ಕೋಡಿಯ ಶಶಿಧರ್ ಕೋರ್ಪಡೆ
ಹೆಂಡತಿ ಶಾಂತಾ ಕಿರುಕುಳದಿಂದ ಬೇಸತ್ತಿದ್ದಾರಂತೆ ಶಶಿಧರ್

ಚಿಕ್ಕೋಡಿ(ಜೂ.27): ವಟ ಸಾವಿತ್ರಿ ಹುಣ್ಣಿಮೆ ನಿಮಿತ್ತ ಮಹಿಳೆಯರು ವಿಶೇಷ ಪೂಜೆ ಸಲ್ಲಿಸ್ತಾರೆ. ಪತಿಗೆ ಆಯುರಾರೋಗ್ಯ ಕೋರಿ ಹಾಗೂ ಮುಂದಿನ  ಜನ್ಮದಲ್ಲೂ ಇದೇ ಗಂಡ ಸಿಗಬೇಕೆಂದು ಅತ್ತಿ ಗಿಡಕ್ಕೆ ಪೂಜೆ ಮಾಡಿ, ಪ್ರದಕ್ಷಿಣೆ ಹಾಕಿ, ಗಿಡಕ್ಕೆ ದಾರ ಕಟ್ಟುವುದು ಸಂಪ್ರದಾಯ. ಆದರೆ, ಇಲ್ಲೊಬ್ಬ ಪತಿರಾಯ, ತನಗೆ ಯಾವ ಜನ್ಮದಲ್ಲೂ ಇಂಥ ಹೆಂಡತಿಯೇ ಬೇಡ ಅಂತ ಹರಕೆ ಹೊತ್ತು ಅತ್ತಿ ಗಿಡಕ್ಕೆ ದಾರ ಕಟ್ಟಿದ್ದಾರೆ.
ಚಿಕ್ಕೋಡಿಯ ಶಶಿಧರ ಕೋರ್ಪಡೆ ಪೂಜೆ ಕಂಡು ಇಡೀ ಊರಿಗೆ ಊರು ಅವಕ್ಕಾಗಿದೆ..ಹೆಂಡ್ತಿಯ ಕಿರುಕುಳದಿಂದ ಬೇಸತ್ತಿರೋದಾಗಿ ಹೇಳೋ ಶಶಿಧರ್, ಯಾವ ಜನ್ಮದಲ್ಲೂ ನನಗೆ ಇಂಥ ಹೆಂಡ್ತಿ ಬೇಡ ಅಂತಿದ್ದಾರೆ. ಚಿಕ್ಕೋಡಿಯಲ್ಲಿ ಪುರುಷ ಸಾಂತ್ವನ ಕೇಂದ್ರವನ್ನೂ ಆರಂಭಿಸಿರೋ ಶಶಿಧರ್, ಕೇಂದ್ರದ ಸದಸ್ಯರ ಸಮ್ಮುಖ ಅತ್ತಿ ಗಿಡಕ್ಕೆ ದಾರ ಕಟ್ಟಿ ಪೂಜೆ ನೆರವೇರಿಸಿದ್ರು.
 ಹೆಂಡತಿ ನನಗೆ ಹಾಗೂ ನನ್ನ ತಂದೆ-ತಾಯಿ, ಅಕ್ಕ ತಂಗಿ, ಅಣ್ಣ-ತಮ್ಮಂದಿರ ಮೇಲೆ ಸುಳ್ಳು ವರದಕ್ಷಿಣೆ ಕೇಸ್ ಹಾಕಿ  ತೊಂದರೆ ಕೊಟ್ಟಿದ್ದಾಳೆ ಅಂತ ಶಶಿಧರ್ ಆರೋಪಿಸ್ತಾರೆ. ಮುಂದಿನ ಜನ್ಮದಲ್ಲಿ ನನ್ನ ಮದುವೆ ಆಗದೆ ಬ್ರಹ್ಮಚಾರಿಯಾಗಿ ಬದುಕಿದರೂ ಚಿಂತೆ ಇಲ್ಲ, ಕಿರುಕುಳ ನೀಡುವ ಹೆಂಡತಿ ಬೇಡವೇ ಬೇಡ. ಈ ಕೋರಿಕೆಯೊಂದಿಗೆ ಹತ್ತಿ ಗಿಡಕ್ಕೆ ದಾರ ಕಟ್ಟುವ ಸಂಪ್ರದಾಯ ನೆರವೇರಿಸಿದ್ದೇನೆ ಅಂತ ನೊಂದು ನುಡಿಯುತ್ತಾರೆ..
 

1995ರಲ್ಲಿ ಶಾಂತ - ಶಶಿಧರ್ ಮದುವೆ ನಡೆದಿತ್ತು. 2011ರ ಆಗಸ್ಟ್ ವರೆಗೂ ಒಂದಾಗಿದ್ರು. ಬಳಿಕ ಶಾಂತ, ಶಶಿಧರ್ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದು, ಇನ್ನೂ ವಿಚಾರಣೆ ನಡೆಯುತ್ತಿದೆ