ಕತ್ತೆಗಳ ಜೊತೆ ಹೋಳಿ ಹಬ್ಬ
ವಿಭಿನ್ನವಾಗಿ ಪ್ರತಿಭಟನೆ ಮಾಡುವ ವಾಟಾಳ್ ನಾಗರಾಜ್ ಪ್ರಾಣಿಗಳನ್ನೇ ತಮ್ಮ ಗುರುತಾಗಿ ಇಟ್ಟುಕೊಳ್ಳುತ್ತಾರೆ ಹೀಗಾಗಿ , ಈ ಬಾರಿಯ ಹೋಳಿಗೆ ಮುಗ್ದ ಪ್ರಾಣಿ ಜತೆ ಹೋಳಿ ಆಚರಿಸಿಕೊಳ್ಳುವ ಮೂಲಕ ಪ್ರಾಣಿಪ್ರಿಯತೆ ಮೆರೆದರು
ಬೆಂಗಳೂರು(ಮಾ.20): ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಕತ್ತೆಗಳ ಜತೆ ಹೋಳಿಹಬ್ಬವನ್ನು ವಿನೂತನವಾಗಿ ಆಚರಿಸಿಕೊಂಡರು. ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಜೋಡಿ ಕತ್ತೆ, ಆಡುಗಳಿಗೆ ಬಣ್ಣ ಎರಚಿ ಹೋಳಿ ಹಬ್ಬವನ್ನ ಆಚರಿಸಿಕೊಂಡ್ರು. ವಿಭಿನ್ನವಾಗಿ ಪ್ರತಿಭಟನೆ ಮಾಡುವ ವಾಟಾಳ್ ನಾಗರಾಜ್ ಪ್ರಾಣಿಗಳನ್ನೇ ತಮ್ಮ ಗುರುತಾಗಿ ಇಟ್ಟುಕೊಳ್ಳುತ್ತಾರೆ ಹೀಗಾಗಿ , ಈ ಬಾರಿಯ ಹೋಳಿಗೆ ಮುಗ್ದ ಪ್ರಾಣಿ ಜತೆ ಹೋಳಿ ಆಚರಿಸಿಕೊಳ್ಳುವ ಮೂಲಕ ಪ್ರಾಣಿಪ್ರಿಯತೆ ಮೆರೆದರು.ಜೊತೆಗೆ ನಿಸರ್ಗವನ್ನು ಉಳಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡ ವಾಟಾಳ್ ಕಾರ್ಯಕರ್ತರು ಸುರಿದ ಬಣ್ಣದಲ್ಲಿ ಮಿಂದೆದ್ದರು.