ತರಾತುರಿಯಲ್ಲಿ ಸರ್ಕಾರ ರಚನೆ: ರಾಜ್ಯ ಬಿಜೆಪಿಗೆ ಬ್ರೇಕ್ ಹಾಕಿದ ಹೈಕಮಾಂಡ್
ಹಿಂದಿನ ಸರ್ಕಾರದ ತಪ್ಪುಗಳಿಂದ ಪಾಠ ಕಲಿತ ಕಮಲ ಪಡೆ| ತರಾತುರಿಯಲ್ಲಿ ಸರ್ಕಾರ ರಚನೆಗೆ ಹೈಕಮಾಂಡ್ ಬ್ರೇಕ್| ಕಾನೂನು ಸಮಸ್ಯೆ, ಅತೃಪ್ತಿ ಭುಗಿಲೇಳದಂತೆ ತಡೆಗೆ ಪ್ಲಾನ್
ಬೆಂಗಳೂರು[ಜು.24]: ಹಿಂದಿನ ಸರ್ಕಾರ ಮಾಡಿದ ತಪ್ಪುಗಳಿಂದ ಕಮಲಪಡೆ ಪಾಠ ಕಲಿತಿದ್ದು, ತರಾತುರಿಯಲ್ಲಿ ಸರ್ಕಾರ ರಚನೆಗೆ ರಾಜ್ಯ ಬಿಜೆಪಿಗೆ ಹೈಕಮಾಂಡ್ ಬ್ರೇಕ್ ಹಾಕಿದೆ.
ಯಡಿಯೂರಪ್ಪ ಬಿಎಸ್ವೈ ಆಪ್ತ ಶಾಸ್ತ್ರಿಗಳು, ಪ್ರಮಾಣ ವಚನಕ್ಕೆ ಶುಕ್ರವಾರ ಸಂಜೆ 4 ಗಂಟೆಗೆ ಯಡಿಯೂರಪ್ಪ ಪ್ರಮಾಣ ವಚನಕ್ಕೆ ಮಹೂರ್ತ ನಿಗಧಿಪಡಿಸಿದ್ದಾರೆ. ಆದರೆ ಬಿಎಸ್ ವೈ ಯಡಿಯೂರಪ್ಪ ಮಾತ್ರ ಇದಕ್ಕಿನ್ನೂ ಅನುಮತಿ ನೀಡಿಲ್ಲವೆನ್ನಲಾಗಿದೆ. ಈ ಹಿಂದೆ ರಾಜ್ಯ ಬಿಜೆಪಿ ಆತುರಾತುರವಾಗಿ ಸರ್ಕಾರ ರಚಿಸಲು ಮುಂದಾಗಿತ್ತು. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದರೂ ಬಹುಮತ ಸಾಬೀತುಪಡಿಸಲು ಸಾಧ್ಯವಾಗಿರಲಿಲ್ಲ.
ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಕಳೆದ ಮೂರು ವಾರಗಳಿಂದ ಏನೇನಾಯ್ತು?
ಇದಾದ ಬಳಿಕ ಅಸ್ತಿತ್ವಕ್ಕೆ ಬಂದ ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರವೂ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ವಿಫಲಗೊಂಡಿದ್ದು, ಅಂತ್ಯ ಕಂಡಿದೆ. ಇವೆಲ್ಲಾ ಸ್ಥಿತಿ ಗತಿಗಳನ್ನು ಅವಲೋಕಿಸಿರುವ ಬಿಜೆಪಿ ಹೈಕಮಾಂಡ್ ಸರ್ಕಾರ ರಚಿಸುವಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳದಂತೆ ಎಚ್ಚರ ವಹಿಸಿದೆ. ಕಾನೂನು ಸಮಸ್ಯೆ, ಅತೃಪ್ತಿ ಭುಗಿಲೇಳದಂತೆ ತಡೆಗೆ ಪ್ಲಾನ್ ಮಾಡುವುದರೊಂದಿಗೆ, ಪಕ್ಷದ ಒಳಗೆ ಭಿನ್ನಾಭಿಪ್ರಾಯ ಮೂಡದಂತೆ ಮೊದಲೇ ಎಚ್ಚರಿಕೆ ವಹಿಸಿಕೊಳ್ಳಲಾಗುತ್ತಿದೆ. ಈ ಮೂಲಕ ಸರ್ಕಾರಕ್ಕೆ ಯಾವುದೇ ಅಪಾಯವಾಗದಂತೆ ಮುನ್ನೆಚ್ಚರಿಕೆಯಿಂದ ಹೆಜ್ಜೆ ಇಡಲು ಮುಂದಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ರಾಷ್ಟ್ರ ನಾಯಕರೇ ಮುಂದಾಳತ್ವ ವಹಿಸಿಕೊಂಡಿದ್ದು, ಯಡಿಯೂರಪ್ಪ ನೇತೃತ್ವದ ಸುಭದ್ರ ಸರ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.