Asianet Suvarna News Asianet Suvarna News

ರಾಮನಗರ ಕ್ಷೇತ್ರದ ಜನತೆ ಒಪ್ಪಿದರೆ ಉತ್ತರ ಕರ್ನಾಟಕದ ಈ ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದಾರೆ ಹೆಚ್'ಡಿಕೆ

ಉತ್ತರ ಕರ್ನಾಟಕದಲ್ಲಿ ಸುಮಾರು 40-50 ಶಾಸಕರನ್ನು ಗೆಲ್ಲಿಸಬೇಕೆಂಬ ಮಹದಾಸೆಯಿಂದ ಇಲ್ಲಿಂದಲೇ ಸ್ಪರ್ಧಿಸಬೇಕೆಂಬ ಬಯಕೆಯಿದೆ.

HDK May Contest another constituency also

ದೇವರಹಿಪ್ಪರಗಿ(ಜ.31): ರಾಮನಗರದ ಜನ ಒಪ್ಪಿದರೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರದಿಂದಲೂ ಸ್ಪರ್ಧಿಸಲು ಸಿದ್ಧ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮಂಗಳವಾರ ದೇವರಹಿಪ್ಪರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನನಗೆ ರಾಜಕೀಯ ಜನ್ಮ ನೀಡಿದ ರಾಮನಗರದ ಜನತೆಯ ಅನುಮತಿ ಕೇಳಿಕೊಂಡು ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ನಿಲ್ಲುವ ಕುರಿತು ನಿರ್ಧರಿಸುತ್ತೇನೆ. ಉತ್ತರ ಕರ್ನಾಟಕದಲ್ಲಿ ಸುಮಾರು 40-50 ಶಾಸಕರನ್ನು ಗೆಲ್ಲಿಸಬೇಕೆಂಬ ಮಹದಾಸೆಯಿಂದ ಇಲ್ಲಿಂದಲೇ ಸ್ಪರ್ಧಿಸಬೇಕೆಂಬ ಬಯಕೆಯಿದೆ. ಆದರೆ, ರಾಮನಗರ ಮತ್ತು ನನ್ನದು ತಾಯಿ-ಮಗನ ಸಂಬಂಧ.

ಎರಡೂ ಕಡೆ ನಿಲ್ಲಬೇಕೆಂದರೆ ಅವರನ್ನು ಕೇಳಿಯೇ ನಿರ್ಧರಿಸುತ್ತೇನೆ. ಮುಂದಿನ ದಿನಗಳಲ್ಲಿ ದೇವರಹಿಪ್ಪರಗಿಯಿಂದ ನಮ್ಮ ಪಕ್ಷದ ಯಾರೇ ಶಾಸಕರಾದರೂ ಕುಮಾರಸ್ವಾಮಿಯವರೇ ಈ ಕ್ಷೇತ್ರವನ್ನು ಪ್ರತಿನಿಧಿಸಿದಂತೆ. ಇಲ್ಲಿನ ಅಭಿವೃದ್ಧಿಗೆ ರಾಮನಗರದ ರೀತಿಯಲ್ಲೇ ನಿಗಾವಹಿಸುತ್ತೇನೆ ಎಂದು ಭರವಸೆ ನೀಡಿದರು.

ಫೆ.17ಕ್ಕೆ ಅಭ್ಯರ್ಥಿಗಳ ಪಟ್ಟಿ: ಇದಕ್ಕೂ ಮೊದಲು ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಿಂದ ಸ್ಪರ್ಧಿಸಲಿರುವ ಅಭ್ಯರ್ಥಿ ಗಳ ಮೊದಲ ಪಟ್ಟಿಯನ್ನು ಫೆ.17ರಂದು ಬಿಡುಗಡೆ ಮಾಡಲಾಗುತ್ತದೆ.

Follow Us:
Download App:
  • android
  • ios