ಕಾಂಗ್ರೆಸ್ಸಿನ ಪುಟ್ಟಸ್ವಾಮಿಗೌಡರು ಜಯಭೇರಿ ಬಾರಿಸಿದ್ದರು. ಈ ಸೋಲಿನ ಬಳಿಕ ಪುಟಿದೆದ್ದ ದೇವೇಗೌಡ, 1994ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾದರು

ಕನಕಪುರದಲ್ಲಿ ಗೌಡರನ್ನು 3ನೇ ಸ್ಥಾನಕ್ಕೆ ಮಣಿಸಿದ್ದವರು ಈಗ ಜೆಡಿಎಸ್'ನ ಮೊದಲ ಸಾಲಿನ ನಾಯಕರು ರಾಜಕಾರಣದಲ್ಲಿ ಏಳು-ಬೀಳು ಸಾಮಾನ್ಯ. ಈ ಮಾತಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗಿಂತ ಉದಾಹರಣೆ ಬೇಕಿಲ್ಲ. 1989ರ ವಿಧಾನಸಭೆ ಚುನಾವಣೆಯಲ್ಲಿ ಕನಕಪುರ ಹಾಗೂ ಹೊಳೆನರಸೀಪುರ ಎರಡೂ ಕ್ಷೇತ್ರಗಳಲ್ಲೂ ದೇವೇಗೌಡ ಸ್ಪರ್ಧೆ ಮಾಡಿದ್ದರು.

Add Asianetnews Kannada as a Preferred SourcegooglePreferred

ಕನಕಪುರದಲ್ಲಿ ಪಿಜಿಆರ್ ಸಿಂಧ್ಯ ಎದುರು ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಹೊಳೆನರಸೀಪುರದಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಕಾಂಗ್ರೆಸ್ಸಿನ ಪುಟ್ಟಸ್ವಾಮಿಗೌಡರು ಜಯಭೇರಿ ಬಾರಿಸಿದ್ದರು. ಈ ಸೋಲಿನ ಬಳಿಕ ಪುಟಿದೆದ್ದ ದೇವೇಗೌಡ, 1994ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾದರು. 1996ರಲ್ಲಿ ಪ್ರಧಾನಿ ಹುದ್ದೆಗೂ ಏರಿದರು.