Asianet Suvarna News Asianet Suvarna News

‘ಮೈತ್ರಿ ಸರ್ಕಾರ ಬೇಡವೆನ್ನುತ್ತಿದ್ದಾರೆ ಮತ್ತಿಬ್ಬರು ಕೈ ಶಾಸಕರು’

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ  ಪ್ರಜಾಪ್ರಭುತ್ವಕ್ಕೆ ಗೌರವ ನೀಡಿ ರಾಜೀನಾಮೆ ನೀಡಲು ಆಗ್ರಹಿಸಲಾಗಿದ್ದು, ಮತ್ತಿಬ್ಬರು ಕೈ ನಾಯಕರು ಮೈತ್ರಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. 

HD Kumaraswamy Should Quit CM Post Says BS Yeddyurappa
Author
Bengaluru, First Published Jul 14, 2019, 1:46 PM IST

ಬೆಂಗಳೂರು [ಜು.14] : ರಾಜ್ಯ ರಾಜಕೀಯದ ಪ್ರಹಸನ ಮುಂದುವರಿದಿದೆ. ದಿನದಿನವೂ ಅತೃಪ್ತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದೀಗ ಈ ಸಾಲಿಗೆ ಮತ್ತಿಬ್ಬರು ಸೇರಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.  

ಹೊಸಕೋಟೆ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್ ಹಾಗೂ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಕೂಡ ಮೈತ್ರಿ ಸರ್ಕಾರ ಬೇಡ ಎನ್ನುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ಕಿಸಿ

ಇನ್ನು ಈಗಾಗಲೇ 15  ಜನ ಅತೃಪ್ತ ಶಾಸಕರು ಸರ್ಕಾರ ಬೇಡವೆಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಮಂಗಳವಾರ ಸುಪ್ರೀಂ ಕೋರ್ಟ್ ತೀರ್ಮಾನ ಮಾಡಲಿದೆ. ಈ ತೀರ್ಪಿಗೆ ಕಾಯುತ್ತಿರುವುದಾಗಿ  ಯಡಿಯೂರಪ್ಪ ಹೇಳಿದರು.  

ಇನ್ನು ಈ ಮೈತ್ರಿ ಸರ್ಕಾರ ಉಳಿಯುವುದು ಮೈತ್ರಿ ಶಾಸಕರಿಗೆ ಒಪ್ಪಿಗೆ ಇಲ್ಲ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಾವು ಹೇಳುವುದೇನೆಂದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೆ  ಸೋಮವಾರ ನೀವೇ ರಾಜೀನಾಮೆ ನೀಡಲಿ ಎಂದರು. 

Follow Us:
Download App:
  • android
  • ios