Asianet Suvarna News Asianet Suvarna News

ಸಿಎಂಗೆ ತಾಕತ್ ಇದ್ದರೆ ನನ್ನೊಂದಿಗೆ ಓಪನ್ ಡಿಬೇಟ್ಸ್'ಗೆ ಬರಲಿ

ನಾನು ಇಸ್ರೇಲ್'ಗೆ ಹೋಗಿ ಕೃಷಿ ಅಧ್ಯಯನ ಮಾಡಿದ್ದನ್ನು ಲಘುವಾಗಿ ಮಾತಾಡುತ್ತೀರಾ..? ನೀವು ಏನೇನು ಮಾಡಿದ್ದೀರಾ ಎನ್ನುವುದನ್ನು ಜನರ ಮುಂದೆ ಇಡ್ತೀನಿ. ನನ್ನ ಬಗ್ಗೆ ಹಾಗೂ ಜೆಡಿಎಸ್ ಬಗ್ಗೆ ಮುಖ್ಯಮಂತ್ರಿಗಳು ಉಢಾಪೆ ಮಾತುಗಳಿಗೆ ಮುಂದಿನ ದಿನಗಳಲ್ಲಿ ಜನರು ಉತ್ತರ ಕೊಡುತ್ತಾರೆ.

HD Kumaraswamy Challenges CM Siddaramaiah

ಬೆಂಗಳೂರು(ಮಾ.02): ಕಳೆದ ಮೂರುವರೆ ವರ್ಷದಲ್ಲಿ ನೀವೇನು ಸಾಧನೆ ಮಾಡಿದ್ದೀರ? ಬಿಜೆಪಿಯನ್ನು ಚರ್ಚೆಗೆ ಬನ್ನಿ ಎನ್ನುವ ನೀವು ತಾಕತ್ ಇದ್ದರೆ ನನ್ನೊಂದಿಗೆ ಓಪನ್ ಡಿಬೇಟ್'ಗೆ ಬನ್ನಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಕ್ತ ಆಹ್ವಾನ ನೀಡಿದ್ದಾರೆ.

ನಾನು ಇಸ್ರೇಲ್'ಗೆ ಹೋಗಿ ಕೃಷಿ ಅಧ್ಯಯನ ಮಾಡಿದ್ದನ್ನು ಲಘುವಾಗಿ ಮಾತಾಡುತ್ತೀರಾ..? ನೀವು ಏನೇನು ಮಾಡಿದ್ದೀರಾ ಎನ್ನುವುದನ್ನು ಜನರ ಮುಂದೆ ಇಡ್ತೀನಿ. ನನ್ನ ಬಗ್ಗೆ ಹಾಗೂ ಜೆಡಿಎಸ್ ಬಗ್ಗೆ ಮುಖ್ಯಮಂತ್ರಿಗಳು ಉಢಾಪೆ ಮಾತುಗಳಿಗೆ ಮುಂದಿನ ದಿನಗಳಲ್ಲಿ ಜನರು ಉತ್ತರ ಕೊಡುತ್ತಾರೆ.

ಕರ್ನಾಟಕ ಸೋಲಾರ್ ವಿದ್ಯುತ್ಚಕ್ತಿ ಉತ್ಫಾದನೆ ಮಾಡುತ್ತಿರುವುದು ಪ್ರಪಂಚದ ಎಂಟನೇ ಅದ್ಭುತ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಸಿಎಂ ಹೇಳಿಕೆ ಕೇಳಿ ಆಶ್ಚರ್ಯವಾಗ್ತಿದೆ. ಸೋಲಾರ್ ಶಕ್ತಿಯನ್ನು ಈಗಾಗಲೇ ಹಲವಾರು ದೇಶಗಳು ಸಾವಿರಾರು ಮೆಗವ್ಯಾಟ್ ಉತ್ಫಾದನೆ ಮಾಡುತ್ತಿವೆ. ಈ ಪ್ರಪಂಚದಲ್ಲಿ ಮೊದಲನೇ ಬಾರಿಗೆ ಇವರು ಸೋಲಾರ್ ವಿದ್ಯುತ್ ಉತ್ಫಾದನೆ ಮಾಡಿದ್ದಾರಾ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ

Follow Us:
Download App:
  • android
  • ios