ತನ್ನ ವಿರುದ್ಧ ಡಿನೋಟಿಫಿಕೇಶನ್​ ಪ್ರಕರಣ ಕುರಿತು ಎಸಿಬಿ ದಾಖಲಿಸಿದ್ದ ಎಫ್ಐಆರ್ ರದ್ದತಿ ಕೋರಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಇಂದು ವಿಚಾರಣೆಗೆ ತೆಗೆದುಕೊಳ್ಳುವಂತೆ ಬಿಎಎಸ್​ವೈ ಪರ ವಕೀಲರು ಹೈಕೋರ್ಟ್​ಗೆ ಶನಿವಾರ ರಿಟ್ ಸಲ್ಲಿಕೆ ಜೊತೆಗೆ ಮೆಮೋ ಸಲ್ಲಿಸಿದ್ದರು.

ಬೆಂಗಳೂರು: ತನ್ನ ವಿರುದ್ಧ ಡಿನೋಟಿಫಿಕೇಶನ್​ ಪ್ರಕರಣ ಕುರಿತು ಎಸಿಬಿ ದಾಖಲಿಸಿದ್ದ ಎಫ್ಐಆರ್ ರದ್ದತಿ ಕೋರಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯನ್ನು ಇಂದು ವಿಚಾರಣೆಗೆ ತೆಗೆದುಕೊಳ್ಳುವಂತೆ ಬಿಎಎಸ್​ವೈ ಪರ ವಕೀಲರು ಹೈಕೋರ್ಟ್​ಗೆ ಶನಿವಾರ ರಿಟ್ ಸಲ್ಲಿಕೆ ಜೊತೆಗೆ ಮೆಮೋ ಸಲ್ಲಿಸಿದ್ದರು. ಆದರೆ ಹೈಕೋರ್ಟ್ ಇಂದು ವಿಚಾರಣೆ ಕೈಗೆತ್ತಿಕೊಳ್ಳಲು ನಿರಾಕರಿಸಿದೆ.

ಪಟ್ಟಿಯಂತೆ ಪ್ರಕರಣದ ವಿಚಾರಣೆ ನಡೆಸುವುದಾಗಿ ನ್ಯಾಯಮೂರ್ತಿ ತಿಳಿಸಿದ್ದಾರೆ. ಹೀಗಾಗಿ ನಾಳೆ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ.