ಈಕೆ ಐತಿಹಾಸಿಕ ಹಿನ್ನೆಲೆ ಹೊಂದಿದ ಶಕ್ತಿದೇವತೆ. ಕಳೆದ ವರ್ಷ ಹಚ್ಚಿದ ದೀಪ ಈ ವರ್ಷ ಬಾಗಿಲು ತೆರೆದಾಗಲೂ ಉರಿಯುತ್ತಿರುತ್ತದೆ ಹಾಗೂ ದೇವರ ಮುಂದಿಟ್ಟಿದ್ದ ಎಡೆ ಹಳಸಿರುವುದಿಲ್ಲ, ದೇವಿಗೆ ಮುಡಿಸಿರುವ ಹೂವು ಬಾಡದೇ ಹಾಗೇ ಇರುತ್ತದೆ.

ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನ ಅದ್ದೂರಿಯಾಗಿ ನಡೆಯುತ್ತಿದೆ. ಮಧ್ಯಾಹ್ನ 12.30ಕ್ಕೆ ಶಾಸ್ತ್ರೋಕ್ತವಾಗಿ ದೇವಾಲಯದ ಬಾಗಿಲು ತೆಗೆಯಿತು. ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇವಿಗೆ ಇಂದು ವಿಶೇಷ ಪೂಜೆ ನಡೆಯುತ್ತದೆ. ನಂತರ ನಾಳೆ ಬೆಳಗ್ಗೆ 6ರಿಂದ ಭಕ್ತರಿಗೆ ಹಾಸನಾಂಬೆಯ ದರ್ಶನ ಭಾಗ್ಯ ಸಿಗಲಿದೆ. ಇನ್ನು ದೇಗುಲ ಮುಂಭಾಗವಿರುವ ಬಾಳೆ ಕಂಬನ್ನು ಕತ್ತರಿಸುವ ಮೂಲಕ ದೇವಸ್ಥಾನದ ಬಾಗಿಲನ್ನು ತೆರೆಯಲಾಯಿತು. ದೇವಾಲಯಕ್ಕೆ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿದ್ದು ದೇವಿಯ ದರ್ಶನಕ್ಕೆ ಭಕ್ತಸಾಗರ ಹರಿದು ಬರುತ್ತಿದೆ. ದೇವಾಲಯಕ್ಕೆ ಸೂಕ್ತ ಭದ್ರತೆ ಒದಗಿಸಲಾಗಿದ್ದು ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ .

ಹಾಸನದ ಅಧಿದೇವತೆ ಹಾಸನಾಂಬೆ

ಈಕೆ ಐತಿಹಾಸಿಕ ಹಿನ್ನೆಲೆ ಹೊಂದಿದ ಶಕ್ತಿದೇವತೆ. ಕಳೆದ ವರ್ಷ ಹಚ್ಚಿದ ದೀಪ ಈ ವರ್ಷ ಬಾಗಿಲು ತೆರೆದಾಗಲೂ ಉರಿಯುತ್ತಿರುತ್ತದೆ ಹಾಗೂ ದೇವರ ಮುಂದಿಟ್ಟಿದ್ದ ಎಡೆ ಹಳಸಿರುವುದಿಲ್ಲ, ದೇವಿಗೆ ಮುಡಿಸಿರುವ ಹೂವು ಬಾಡದೇ ಹಾಗೇ ಇರುತ್ತದೆ. ಅಂತಹ ಮಹಿಮೆಯನ್ನು ದೇವಿ ಹೊಂದಿದ್ದಾಳೆ ಅನ್ನೋ ನಂಬಿಕೆಯಿದೆ. ಮಕ್ಕಳ ಭಾಗ್ಯ ಕರುಣಿಸೋ ಶಕ್ತಿ ಈ ದೇವಿಗಿದೆ ಎಂದು ಭಕ್ತರು ನಂಬಿದ್ದಾರೆ. ಹಾಗೇ ವರ್ಷಕ್ಕೊಮ್ಮೆ ಮಾತ್ರ ಈ ದೇವಿ ದರ್ಶನ ಭಾಗ್ಯ ನೀಡುತ್ತಾಳೆ. ಅಶ್ವಿಜ ಮಾಸದ ಮೊದಲನೆ ಗುರುವಾರ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಹಾಗೇ ಈ ವರ್ಷ ಅಶ್ವಿಜ ಮಾಸದ ಮೊದಲನೇ ಗುರುವಾರ ಅಂದರೆ ನಾಳೆ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ನವೆಂಬರ್ 1 ರಂದು ಬಾಗಿಲು ಮುಚ್ಚಲಾಗುವುದು. ಈ ಬಾರಿ 13 ದಿನಗಳ ಕಾಲ ದೇವಿಯ ದರ್ಶನ ಭಾಗ್ಯ ಸಿಗಲಿದೆ.