Asianet Suvarna News Asianet Suvarna News

ಪತ್ನಿ ಪೀಡಿತರಿಂದ ಶೂರ್ಪನಖಿ ಪ್ರತಿಕೃತಿ ದಹನ

ಮಹಾರಾಷ್ಟ್ರದ ಔರಂಗಬಾದ್‌ನ ಕಾರೊಲಿ ಎಂಬ ಗ್ರಾಮದಲ್ಲಿ ಪತ್ನಿ ಪೀಡಿತ ಪುರುಷ ಸಂಘಟನೆಯ ಸದಸ್ಯರು ರಾವಣನ ತಂಗಿ ಶೂರ್ಪನಖಿಯ ಪ್ರತಿಕೃತಿ ದಹಿಸಿ ಹಿಡಿಶಾಪ ಹಾಕಿದ್ದಾರೆ.

Harassed Husband Burn surpanakha
Author
Bengaluru, First Published Oct 20, 2018, 1:26 PM IST

ಔರಂಗಬಾದ್ :   ದಸರಾ ಹಬ್ಬದ ವೇಳೆ ರಾವಣನ ಪ್ರತಿಮೆ ದಹಿಸುವುದು ಸಾಮಾನ್ಯ. ಆದರೆ, ಮಹಾರಾಷ್ಟ್ರದ ಔರಂಗಬಾದ್‌ನ ಕಾರೊಲಿ ಎಂಬ ಗ್ರಾಮದಲ್ಲಿ ಪತ್ನಿ ಪೀಡಿತ ಪುರುಷ ಸಂಘಟನೆಯ ಸದಸ್ಯರು ರಾವಣನ ತಂಗಿ ಶೂರ್ಪನಖಿಯ ಪ್ರತಿಕೃತಿ ದಹಿಸಿ ಹಿಡಿಶಾಪ ಹಾಕಿದ್ದಾರೆ.

 ಭಾರತದಲ್ಲಿ ಎಲ್ಲಾ ಕಾನೂನುಗಳು ಮಹಿಳೆಯರ ಪರವಾಗಿವೆ. ಸಣ್ಣ ಸಣ್ಣ ವಿಷಯಕ್ಕೂ ಪತಿಯಂದಿರು ಪತ್ನಿಯರಿಂದ ಕಿರುಕುಳಕ್ಕೆ ಒಳಗಾತ್ತಿದ್ದಾರೆ. ಹೀಗಾಗಿ ನಾವು ಪ್ರತಿಕೃತಿ ದಹಿಸಿದ್ದೇವೆ ಎಂದು ಸಂಘದ ಅಧ್ಯಕ್ಷರೊಬ್ಬರು ಹೇಳಿದ್ದಾರೆ.

Follow Us:
Download App:
  • android
  • ios