ಮಹಾರಾಷ್ಟ್ರದ ಔರಂಗಬಾದ್‌ನ ಕಾರೊಲಿ ಎಂಬ ಗ್ರಾಮದಲ್ಲಿ ಪತ್ನಿ ಪೀಡಿತ ಪುರುಷ ಸಂಘಟನೆಯ ಸದಸ್ಯರು ರಾವಣನ ತಂಗಿ ಶೂರ್ಪನಖಿಯ ಪ್ರತಿಕೃತಿ ದಹಿಸಿ ಹಿಡಿಶಾಪ ಹಾಕಿದ್ದಾರೆ.

ಔರಂಗಬಾದ್ : ದಸರಾ ಹಬ್ಬದ ವೇಳೆ ರಾವಣನ ಪ್ರತಿಮೆ ದಹಿಸುವುದು ಸಾಮಾನ್ಯ. ಆದರೆ, ಮಹಾರಾಷ್ಟ್ರದ ಔರಂಗಬಾದ್‌ನ ಕಾರೊಲಿ ಎಂಬ ಗ್ರಾಮದಲ್ಲಿ ಪತ್ನಿ ಪೀಡಿತ ಪುರುಷ ಸಂಘಟನೆಯ ಸದಸ್ಯರು ರಾವಣನ ತಂಗಿ ಶೂರ್ಪನಖಿಯ ಪ್ರತಿಕೃತಿ ದಹಿಸಿ ಹಿಡಿಶಾಪ ಹಾಕಿದ್ದಾರೆ.

Add Asianetnews Kannada as a Preferred SourcegooglePreferred

 ಭಾರತದಲ್ಲಿ ಎಲ್ಲಾ ಕಾನೂನುಗಳು ಮಹಿಳೆಯರ ಪರವಾಗಿವೆ. ಸಣ್ಣ ಸಣ್ಣ ವಿಷಯಕ್ಕೂ ಪತಿಯಂದಿರು ಪತ್ನಿಯರಿಂದ ಕಿರುಕುಳಕ್ಕೆ ಒಳಗಾತ್ತಿದ್ದಾರೆ. ಹೀಗಾಗಿ ನಾವು ಪ್ರತಿಕೃತಿ ದಹಿಸಿದ್ದೇವೆ ಎಂದು ಸಂಘದ ಅಧ್ಯಕ್ಷರೊಬ್ಬರು ಹೇಳಿದ್ದಾರೆ.