Asianet Suvarna News Asianet Suvarna News

ದೇವರಿಗೆ ಸಲ್ವಾರ್ ಕಮೀಜ್ ತೊಡಿಸಿದ ಅರ್ಚಕ!

ಇಲ್ಲಿನ ಮೈಲಾದುತುರೈನ ಮಯೂರನಾಥ ಸ್ವಾಮಿ ದೇವಸ್ಥಾನದ ಅರ್ಚಕರೊಬ್ಬರು ಅಭಯಂಬಲ್ ದೇವತೆ ವಿಗ್ರಹಕ್ಕೆ ಸಲ್ವಾರ್ ಕಮೀಜ್ ರೀತಿಯ ಅಲಂಕಾರ ಮಾಡಿದ್ದು, ಇದು ಭಾರೀ ವಿರೋಧಕ್ಕೆ ಕಾರಣವಾಗಿದೆ.

Goddess in Salwar Kameez Priest Sacked

ಚೆನ್ನೈ (ಫೆ.06): ಇಲ್ಲಿನ ಮೈಲಾದುತುರೈನ ಮಯೂರನಾಥಸ್ವಾಮಿ ದೇವಸ್ಥಾನದ ಅರ್ಚಕರೊಬ್ಬರು ಅಭಯಂಬಲ್ ದೇವತೆ ವಿಗ್ರಹಕ್ಕೆ ಸಲ್ವಾರ್ ಕಮೀಜ್ ರೀತಿಯ ಅಲಂಕಾರ ಮಾಡಿದ್ದು, ಇದು ಭಾರೀ ವಿರೋಧಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ದೇವಸ್ಥಾನದ ಅರ್ಚಕನನ್ನು ಸೇವೆಯಿಂದ ಕೈಬಿಡಲಾಗಿದೆ. 6  ತಿಂಗಳ ಹಿಂದಷ್ಟೇ ಸೇವೆಗೆ ನಿಯೋಜನೆಯಾಗಿದ್ದ ಅರ್ಚಕರ ಪುತ್ರಗೆ ದೇವಸ್ಥಾನದ ಆಚಾರ-ವಿಚಾರಗಳ ಬಗ್ಗೆ ಸರಿಯಾಗಿ ತಿಳಿದಿರಲಿಲ್ಲ. ಹೀಗಾಗಿ ಶುಕ್ರವಾದ ದೇವತೆ ವಿಗ್ರಹ ಶುಚಿಗೊಳಿಸಿದ ಅರ್ಚಕರ ಪುತ್ರ ರಾಜ್, ಬಳಿಕ ದೇವತೆಗೆ ಸೀರೆ ತೊಡಿಸುವ ಬದಲು ಉತ್ತರ ಭಾರತದ ಶೈಲಿಯಲ್ಲಿ ನೀಲಿ ದುಪ್ಪಟ್ಟಾ, ಪಿಂಕ್ ಕಮೀಜ್ ಮತ್ತು ನೀಲಿ ಸಲ್ವಾರ್ ತೊಡಿಸಿದ್ದ. ಈ ಅಚಾತುರ್ಯವನ್ನು ಮನಗಾಣದ ಪ್ರಧಾನ ಅರ್ಚಕ ಸಹ ದೇವಿಯ ವಿಗ್ರಹದ ಫೋಟೊ ಕ್ಲಿಕ್ಕಿಸಿ, ಫೇಸ್‌ಬುಕ್ಕಲ್ಲಿ ಹಾಕಿದ್ದರು. ಅದು ವಿವಾದಕ್ಕೆ ಕಾರಣವಾದ ಬಳಿಕ ಅಪ್ಪ, ಮಗ ಇಬ್ಬರನ್ನೂ ಸೇವೆಯಿಂದ ಕೈಬಿಡಲಾಗಿದೆ.

 

Follow Us:
Download App:
  • android
  • ios