ತಮ್ಮ ರಾಜಕೀಯ ಪ್ರವೇಶದ ಹಿಂದೆ ಬಿಜೆಪಿಯ ಬೆಂಬಲವಿದೆ ಎಂಬ ಗುಮಾನಿಯನ್ನು ನಟ ರಜನೀಕಾಂತ್‌ ತಳ್ಳಿಹಾಕಿದ್ದಾರೆ.

ಚೆನ್ನೈ: ತಮ್ಮ ರಾಜಕೀಯ ಪ್ರವೇಶದ ಹಿಂದೆ ಬಿಜೆಪಿಯ ಬೆಂಬಲವಿದೆ ಎಂಬ ಗುಮಾನಿಯನ್ನು ನಟ ರಜನೀಕಾಂತ್‌ ತಳ್ಳಿಹಾಕಿದ್ದಾರೆ. ಉತ್ತರಾಖಂಡದಲ್ಲಿ ಕೆಲವು ಬಿಜೆಪಿ ಸದಸ್ಯರನ್ನು ಭೇಟಿ ಮಾಡಿದ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ರಜನೀಕಾಂತ್‌, ನಾನಿನ್ನೂ ಪೂರ್ಣ ಪ್ರಮಾಣದ ರಾಜಕಾರಣಿಯಾಗಿಲ್ಲ.

Add Asianetnews Kannada as a Preferred SourcegooglePreferred

ಆರಂಭದಿಂದಲೂ ನನ್ನ ಹಿಂದೆ ಬಿಜೆಪಿ ಇದೆ ಎಂಬ ಮಾತನ್ನು ಆಡಲಾಗುತ್ತಿದೆ. ಆದರೆ, ದೇವರು ಮತ್ತು ಜನರು ಮಾತ್ರ ನನ್ನ ಹಿಂದೆ ಇದ್ದಾರೆ ಎಂದು ಹೇಳಿದ್ದಾರೆ. ಹಿಮಾಲಯಕ್ಕೆ ಅಧ್ಯಾತ್ಮಿಕ ಯಾತ್ರೆ ಕೈಗೊಂಡಿದ್ದ ರಜನೀಕಾಂತ್‌ ಚೆನ್ನೈಗೆ ಮರಳಿದ್ದಾರೆ.