ಮಹದಾಯಿ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣಿಸುತ್ತವೆ. ಮಿತ್ರಪಕ್ಷಗಳ ಒತ್ತಡದಿಂದ ಗೊಂದಲಕ್ಕೀಡಾಗಿದ್ದ  ಸಿಎಂ ಮನೋಹರ್ ಪರ್ರಿಕರ್ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಈ ಸಂಬಂಧ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಕರ್ನಾಟಕ ಸರ್ಕಾರದ ಜತೆಗೆ ಮಾತುಕತೆಗೆ ಸಿದ್ಧ ಎಂದು ಗೋವಾ ಹೇಳಿದೆ. ಗೋವಾ ಸಿಎಂ ಬರೆದ ಪತ್ರದ ಪ್ರತಿ  ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.

ಬೆಂಗಳೂರು (ಡಿ.21): ಮಹದಾಯಿ ಬಿಕ್ಕಟ್ಟು ಬಗೆಹರಿಯುವ ಲಕ್ಷಣಗಳು ಕಾಣಿಸುತ್ತವೆ. ಮಿತ್ರಪಕ್ಷಗಳ ಒತ್ತಡದಿಂದ ಗೊಂದಲಕ್ಕೀಡಾಗಿದ್ದ ಸಿಎಂ ಮನೋಹರ್ ಪರ್ರಿಕರ್ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಈ ಸಂಬಂಧ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಕರ್ನಾಟಕ ಸರ್ಕಾರದ ಜತೆಗೆ ಮಾತುಕತೆಗೆ ಸಿದ್ಧ ಎಂದು ಗೋವಾ ಹೇಳಿದೆ. ಗೋವಾ ಸಿಎಂ ಬರೆದ ಪತ್ರದ ಪ್ರತಿ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪರಿಕ್ಕರ್ ಪತ್ರದ ಪ್ರಮುಖಾಂಶಗಳು:-

ಕುಡಿಯುವ ನೀರು ವಿಚಾರದಲ್ಲಿ ಗೋವಾ ಆಕ್ಷೇಪಣೆ ಪ್ರಶ್ನೆಯಿಲ್ಲ ಆದರೂ ಈ ವಿಚಾರದಲ್ಲಿ ಚರ್ಚೆ ಮಾಡುವುದು ಈಗ ಅತ್ಯವಶ್ಯಕ. ಕರ್ನಾಟಕ ಹಾಗೂ ಗೋವಾ ಸರ್ಕಾರ ಚರ್ಚೆ ಅತ್ಯಂತ ಅವಶ್ಯಕ. ಮಹದಾಯಿ ನದಿ ವಿವಾದ ನ್ಯಾಯಾಧೀಕರಣದ ಸಲಹೆ ಹಿನ್ನೆಲೆಯಲ್ಲಿ ಎರಡೂ ಸರ್ಕಾರಗಳೂ ಈ ಬಗ್ಗೆ ಚರ್ಚಿಸುವುದು ಈಗ ಅತ್ಯಗತ್ಯ ಎಂದು ಗೋವಾ ಸಿಎಂ ಮನೋಹರ್ ಪರಿಕ್ಕರ್ ಪತ್ರದಲ್ಲಿ ತಿಳಿಸಿದ್ದಾರೆ.