ಮನೆ ಮನೆಗೂ ಪರಶುರಾಮ್ ಹುಟ್ಟುತ್ತಾರೆ; ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ ಈ ಪೋಸ್ಟ್
ಗೌರಿ ಹತ್ಯೆ ಪ್ರಕರಣದಲ್ಲಿ ಪರಶುರಾಮ್ ವಾಗ್ಮೋರೆಯನ್ನು ಎಸ್ ಐಟಿ ಬಂಧಿಸಿ ವಿಚಾರಣೆ ನಡೆಸುತ್ತಿದೆ. ಇವರೇ ಗೌರಿ ಲಂಕೇಶ್’ರನ್ನು ಹತ್ಯೆ ಮಾಡಿದ್ದು ಎಂದು ಬಲವಾಗಿ ಹೇಳಲಾಗುತ್ತಿದ್ದು ವಿಚಾರಣೆ ನಂತರ ಸತ್ಯ ಹೊರ ಬರಬೇಕಷ್ಟೇ. ಪರಶುರಾಮ್ ವಾಗ್ಮೋರೆ ಪರ ಬಿಜಾಪುರ ಮೂಲದ ಮಹಿಳೆಯೊಬ್ಬರು ಫೇಸ್’ಬುಕ್’ನಲ್ಲಿ ಪೋಸ್ಟ್ ಹಾಕಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರು (ಜೂ. 14): ಗೌರಿ ಹತ್ಯೆ ಪ್ರಕರಣದಲ್ಲಿ ಪರಶುರಾಮ್ ವಾಗ್ಮೋರೆಯನ್ನು ಎಸ್ ಐಟಿ ಬಂಧಿಸಿ ವಿಚಾರಣೆ ನಡೆಸುತ್ತಿದೆ. ಇವರೇ ಗೌರಿ ಲಂಕೇಶ್’ರನ್ನು ಹತ್ಯೆ ಮಾಡಿದ್ದು ಎಂದು ಬಲವಾಗಿ ಹೇಳಲಾಗುತ್ತಿದ್ದು ವಿಚಾರಣೆ ನಂತರ ಸತ್ಯ ಹೊರ ಬರಬೇಕಷ್ಟೇ. ಪರಶುರಾಮ್ ವಾಗ್ಮೋರೆ ಪರ ಬಿಜಾಪುರ ಮೂಲದ ಮಹಿಳೆಯೊಬ್ಬರು ಫೇಸ್’ಬುಕ್’ನಲ್ಲಿ ಪೋಸ್ಟ್ ಹಾಕಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ಈ ದೇಶದ ತಳಹದಿ ಹಿಂದುತ್ವ. ಲದ್ದಿಜೀವಿಗಳು ಹಿಂದೂ ವಿರೋಧಿ ಚಟುವಟಿಕೆ ಮಾಡಿದ್ರೆ ಮನೆ ಮನೆಗೂ ಪರಶುರಾಮ್ ವಾಗ್ಮೋರೆ ಹುಟ್ಟುತ್ತಾರೆ ಎಂದು ಪೋಸ್ಟ್ ಮಾಡಿದ್ದಾರೆ.