ಕಚೇರಿಗೆ ನುಗ್ಗಿ ರೇಡಿಯೋ ಜಾಕಿ ರಾಜೇಶ್ ಕೊಲೆ
ಪಾಲಿಕ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳಿಗಾಗಿ ಶೋಧ ನಡೆಸಲಾಗಿದೆ.
ಕೊಚ್ಚಿ (ಮಾ.27): ಕಚೇರಿಗೆ ನುಗ್ಗಿ ರೇಡಿಯೋ ಜಾಕಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.
ರೆಡ್ ಎಫ್ಎಂ ಆರ್ಜೆ ರಾಜೇಶ್ ಕೊಲೆಯಾದ ವ್ಯಕ್ತಿ. ನಿನ್ನೆ ತಡರಾತ್ರಿಯಲ್ಲಿ ಕಾರಿಯಲ್ಲಿ ಬಂದ ದುಷ್ಕರ್ಮಿಗಳು ಸ್ಟುಡಿಯೋಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಿರಿದು ಕೊಲೆ ಮಾಡಿದ್ದಾರೆ. ಪಾಲಿಕ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದುಷ್ಕರ್ಮಿಗಳಿಗಾಗಿ ಶೋಧ ನಡೆಸಲಾಗಿದೆ.