Asianet Suvarna News Asianet Suvarna News

ಅಜಾತಶತ್ರು ಗಂಭೀರ: ಆಸ್ಪತ್ರೆಗೆ ಕುಟುಂಬಸ್ಥರ ಬುಲಾವ್!

ವಾಜಪೇಯಿಗೆ ಪ್ರಾರ್ಥಿಸುತ್ತಿದೆ ಇಡೀ ದೇಶ ! ವಾಜಪೇಯಿ ಆರೋಗ್ಯದ ಬಗ್ಗೆ ಮಾಹಿತಿ! ಕಳೆದ ಎರಡು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ! ಕಳೆದ 24 ಗಂಟೆಯಿಂದ ಬಿಗಡಾಯಿಸಿದ ಆರೋಗ್ಯ 

ನವದೆಹಲಿ(ಆ.16): ಮಾಜಿ ಪ್ರಧಾನಿ ಹಾಗೂ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಕೆಲವೇ ಕ್ಷಣಗಳಲ್ಲಿ ದೆಹಲಿಯ ಏಮ್ಸ್ ವೈದ್ಯರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈಗಾಗಲೇ ವಾಜಪೇಯಿ ಕುಟುಂಬಸ್ಥರು ಏಮ್ಸ್ ಆಸ್ಪತ್ರೆ ತಲುಪಿದ್ದು, ಗ್ವಾಲಿಯರ್ ಮತ್ತು ಆಗ್ರಾದಲ್ಲಿರುವ ಇತರ ಕುಟುಂಬಸ್ಥರಿಗೂ ದೆಹಲಿಗೆ ಬರುವಂತೆ ಸಂದೇಶ ಕಳುಹಿಸಲಾಗಿದೆ.

ಕಳೆದ 24 ಗಂಟೆಗಳಿಂದ ವಾಜಪೇಯಿ ಆರೋಗ್ಯ ಸಂಪೂರ್ಣವಾಗಿ ಬಿಗಡಾಯಿಸಿದ್ದು, ಆಸ್ಪತ್ರೆಗೆ ಕೇಂದ್ರ ಸಚಿವರು ಸೇರಿದಂತೆ ಘತಾನುಘಟಿ ರಾಜಕೀಯ ನಾಯಕರು ಬೇಟಿ ನೀಡುತ್ತಿದ್ದಾರೆ. ಇನ್ನು ಪ್ರಧಾನಿ ಕಾರ್ಯಾಲಯಕ್ಕೆ  ಅಧಿಕೃತ ಮಾಹಿತಿ ರವಾನಿಸಿದ ಬಳಿಕವೇ ಏಮ್ಸ್ ವೈದ್ಯರು ವಾಜಪೇಯಿ ಆರೋಗ್ಯದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಿದ್ದಾರೆ.