Asianet Suvarna News Asianet Suvarna News

ರಾಜ್ಯಕ್ಕೆ ಮುಂಗಾರು ಪ್ರವೇಶ ಆಗಿದ್ಯೋ, ಇಲ್ವೋ? ಹವಾಮಾನ ಇಲಾಖೆಗೇ ಗೊತ್ತಿಲ್ಲ

ಕರಾವಳಿ ತೀರದಲ್ಲಿ ಅತ್ಯುತ್ತಮ ಮಳೆಯಾಗುತ್ತಿದ್ದು,ಮುಂಗಾರು ಪ್ರವೇಶವಾದ ಸುಳಿವು ಸಿಕ್ಕಿದೆ. ಮಲೆನಾಡಿನಲ್ಲಿಯೂ ಓಕೆ ಎನ್ನುವಂಥ ಮಳೆ ಸುರಿಯುತ್ತಿದೆ. ಆದರೆ, ಇತರೆ ಭಾಗಕ್ಕೆ ಮುಂಗಾರು ಪ್ರವೇಶವಾಗುವುದು ಯಾವಾಗ? ಏನು ಹೇಳುತ್ತೆ ಹವಾಮಾನ ಇಲಾಖೆ?

Forecast Department not sure about entering monsoon to Karnataka
Author
Bengaluru, First Published Jun 14, 2019, 10:00 AM IST

ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇನ್ನು ಮೂರು ದಿನ ಮಳೆ ಮುಂದುವರೆಯಲಿದೆ. ಗುರುವಾರ ರಾಜ್ಯದ ಒಳನಾಡು ಜಿಲ್ಲೆಗಳ ಕೆಲವಡೆ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಆದರೆ, ಕೇರಳ ತೀರಕ್ಕೆ ಮುಂಗಾರು ಪ್ರವೇಶವಾಗಿ ಆರು ದಿನ ಕಳೆದಿದೆ. ಆದರೂ ಭಾರತೀಯ ಹವಾಮಾನ ಇಲಾಖೆ ಮಂಗಾರು ಕರ್ನಾಟಕ ಪ್ರವೇಶ ಮಾಡಿದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಸ್ಪಷ್ಟಮಾಹಿತಿಯನ್ನು ನೀಡುತ್ತಿಲ್ಲ. ವಾಯು ಚಂಡಮಾರುತದ ಪರಿಣಾಮವಾಗಿ ಮುಂಗಾರು ಪ್ರವೇಶದ ಕುರಿತು ಸ್ಪಷ್ಟತೆ ಲಭ್ಯವಾಗುತ್ತಿಲ್ಲ ಎಂದು ಹೇಳುತ್ತಿದೆ.

ಮಳೆಗಾಲದಲ್ಲಿ ಗ್ಯಾಜೆಟ್ ಸುರಕ್ಷತೆಗೆ ಹೀಗ್ ಮಾಡಿ

ಅರಬ್ಬಿ ಸಮುದ್ರದಲ್ಲಿ ರೂಪಗೊಂಡಿದ್ದ ವಾಯು ಚಂಡಮಾರುತದ ಪ್ರಭಾವದಿಂದ ಕಳೆದ ನಾಲ್ಕು ದಿನಗಳಿಂದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಗಾಳಿ ಮಳೆ ಸುರಿದಿತ್ತು. ಇದೀಗ ಚಂಡಮಾರುತ ಗುಜರಾತ್‌ ಕರಾವಳಿ ತೀರವನ್ನು ತಲುಪಿದ್ದು, ರಾಜ್ಯದಲ್ಲಿ ಪ್ರಭಾವ ಕಡಿಮೆಯಾಗಿದೆ. ಹೀಗಾಗಿ, ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮಳೆ ಗಾಳಿಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆದರೂ ಮುಂದಿನ ಮೂರು ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Forecast Department not sure about entering monsoon to Karnataka

ದಕ್ಷಿಣ ಹಾಗೂ ಉತ್ತರ ಒಳನಾಡು ಜಿಲ್ಲೆಗಳ ಕೆಲ ಭಾಗದಲ್ಲಿ ಮಾತ್ರ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ತುಂತುರು ಮಳೆ ಹಾಗೂ ಜೋರು ಗಾಳಿ, ಮೋಡ ಕವಿದ ವಾತಾವರಣ ಮುಂದುವರೆಯಲಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ್‌ ರೆಡ್ಡಿ ತಿಳಿಸಿದ್ದಾರೆ.

ಮಳೆಯಲ್ಲಿ ಹೇಗಿ ನೋಡಿಕೊಳ್ಳಬೇಕು ಆರೋಗ್ಯ?

Follow Us:
Download App:
  • android
  • ios