ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಕರ್ನಾಟಕ ಬಂದ್‌'ಗೆ ಕರೆ ನೀಡಲಾಗಿತ್ತು. ಆದ್ರೆ ಬಂದ್‌'ಗೆ ಕೆಲ ಸಂಘಟನೆಗಳು ಬೆಂಬಲ ನೀಡಿದರೆ, ಕೆಲವೊಂದು ಸಂಘಟನೆಗಳು ಬೆಂಬಲ ನಿರಾಕರಿಸಿದ್ದವು. ಆದರೀಗ ಇವೆಲ್ಲದರ ನಡುವೆಯೂ ಹಲವು ಜಿಲ್ಲೆಗಳು ಕಾರ್ಯಕರ್ತರು ಒತ್ತಾಯಪೂರ್ವಕ ಬಂದ್ ಮಾಡಿಸಿದ್ದಾರೆ.

ಬೆಂಗಳೂರು(ಜೂ.12): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಕರ್ನಾಟಕ ಬಂದ್‌'ಗೆ ಕರೆ ನೀಡಲಾಗಿತ್ತು. ಆದ್ರೆ ಬಂದ್‌'ಗೆ ಕೆಲ ಸಂಘಟನೆಗಳು ಬೆಂಬಲ ನೀಡಿದರೆ, ಕೆಲವೊಂದು ಸಂಘಟನೆಗಳು ಬೆಂಬಲ ನಿರಾಕರಿಸಿದ್ದವು. ಆದರೀಗ ಇವೆಲ್ಲದರ ನಡುವೆಯೂ ಹಲವು ಜಿಲ್ಲೆಗಳು ಕಾರ್ಯಕರ್ತರು ಒತ್ತಾಯಪೂರ್ವಕ ಬಂದ್ ಮಾಡಿಸಿದ್ದಾರೆ.

ವಿಜಯಪುರದಲ್ಲಿ ಬಸ್​​'ನಲ್ಲಿದ್ದ ಪ್ರಯಾಣಿಕರನ್ನುಕೆಳಗಿಳಿಸಿಳಿಸುವ ಮೂಲಕ ಕಾರ್ಯಕರ್ತರು ಬಂದ್ ಮಾಡಿಸುವ ಯತ್ನ ನಡೆಸಿದ್ದರೆ, ಬಾಗಲಕೋಟೆಯ ಹಳೆ ಬಸ್ ನಿಲ್ದಾಣದ ಬಳಿ ಒತ್ತಾಯಪೂರ್ವಕವಾಗಿ ಅಂಗಡಿ ಬಂದ್ ಮಾಡಿಸಿದ್ದಾರೆ. ಇತ್ತ ದಾವಣಗೆರೆಲ್ಲೂ ಕಾರ್ಯಕರ್ತರು ಬಲವಂತವಾಗಿ ಹೋಟೆಲ್​ ಮುಚ್ಚಿಸಿದ್ದಾರೆ.

ಒಟ್ಟಾರೆಯಾಗಿ ಜನರು ಬಂದ್'ಗೆ ಬೆಂಬಲ ನೀಡದಿದ್ದರೂ ಕಾರ್ಯಕರ್ತರೇ ಒತ್ತಾಯಪೂರ್ವಕವಾಗಿ ಬಂದ್ ಮಾಡಿಸುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ಬಂದ್'ಗೆ ಯಾವುದೇ ಬೆಂಬಲ ವ್ಯಕ್ಯವಾಗಿಲ್ಲ.