ಜಿಲ್ಲಾ ಉಸ್ತುವಾರಿ ಸಚಿವರ ಪ್ರಕಟ : 21 ಕೈಗೆ, 9 ಜೆಡಿಎಸ್ ತೆಕ್ಕೆಗೆ
- ಮೈತ್ರಿ ಸರ್ಕಾರ ರಚನೆಯಾಗಿ 2 ತಿಂಗಳ ನಂತರ ನೇಮಕ
- 21 ಜಿಲ್ಲೆಗಳು ಕಾಂಗ್ರೆಸ್ ಪಾಲು, 9 ಜೆಡಿಎಸ್'ಗೆ
ಬೆಂಗಳೂರು(ಜು.31): ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿ 2 ತಿಂಗಳ ನಂತರ ಎಲ್ಲ 30 ಜಿಲ್ಲೆಗಳಿಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಲಾಗಿದೆ. ಕಾಂಗ್ರೆಸಿನ ನಾಲ್ವರು ಸಚಿವರಿಗೆ ತಲಾ 2 ಜಿಲ್ಲೆಗಳನ್ನು ನೀಡಲಾಗಿದೆ. 21 ಜಿಲ್ಲೆಗಳು ಕಾಂಗ್ರೆಸ್ ಪಾಲಾದರೆ 9 ಜೆಡಿಎಸ್'ಗೆ ಲಭಿಸಿವೆ.
ಜಿಲ್ಲಾ ಉಸ್ತುವಾರಿ ಸಚಿವರು
- ಡಾ.ಜಿ.ಪರಮೇಶ್ವರ್ (ಬೆಂಗಳೂರು ನಗರ ಹಾಗೂ ತುಮಕೂರು)
- ಆರ್.ವಿ.ದೇಶಪಾಂಡೆ(ಉತ್ತರ ಕನ್ನಡ ಮತ್ತು ಧಾರವಾಡ)
- ಡಿ.ಕೆ.ಶಿವಕುಮಾರ್(ರಾಮನಗರ ಹಾಗೂ ಬಳ್ಳಾರಿ)
- ಕೆ.ಜೆ.ಜಾರ್ಜ್ (ಚಿಕ್ಕಮಗಳೂರು)
- ರಮೇಶ್ ಜಾರಕಿಹೊಳಿ(ಬೆಳಗಾವಿ)
- ಶಿವಾನಂದ ಪಾಟೀಲ್(ಬಾಗಲಕೋಟೆ)
- ಪ್ರಿಯಾಂಕ್ ಖರ್ಗೆ(ಕಲಬುರಗಿ)
- ರಾಜಶೇಖರ್ ಬಿ.ಪಾಟೀಲ್(ಯಾದಗಿರಿ)
- ವೆಂಕಟರಮಣಪ್ಪ(ಚಿತ್ರದುರ್ಗ)
- ಎನ್.ಎಚ್.ಶಿವಶಂಕರರೆಡ್ಡಿ(ಚಿಕ್ಕಬಳ್ಳಾಪುರ)
- ಕೃಷ್ಣ ಭೈರೇಗೌಡ(ಬೆಂಗಳೂರು ಗ್ರಾಮಾಂತರ & ಕೋಲಾರ)
- ಯು.ಟಿ.ಖಾದರ್(ದಕ್ಷಿಣ ಕನ್ನಡ)
- ಸಿ.ಪುಟ್ಟರಂಗಶೆಟ್ಟಿ (ಚಾಮರಾಜನಗರ)
- ಜಮೀರ್ ಅಹ್ಮದ್ ಖಾನ್(ಹಾವೇರಿ)
- ಜಯಮಾಲಾ(ಉಡುಪಿ )
- ಆರ್.ಶಂಕರ್(ಕೊಪ್ಪಳ)
- ಎನ್.ಮಹೇಶ್(ಗದಗ )
- ವೆಂಕಟರಾವ್ ನಾಡಗೌಡ (ರಾಯಚೂರು)
- ಎಸ್.ಆರ್.ಶ್ರೀನಿವಾಸ್(ದಾವಣಗೆರೆ)
- ಸಾ.ರಾ.ಮಹೇಶ್ (ಕೊಡಗು )
- ಸಿ.ಎಸ್.ಪುಟ್ಟರಾಜು(ಮಂಡ್ಯ )
- ಬಂಡೆಪ್ಪ ಕಾಂಶಪೂರ್(ಬೀದರ್ )
- ಎಚ್.ಡಿ.ರೇವಣ್ಣ(ಹಾಸನ )
- ಡಿ.ಸಿ.ತಮ್ಮಣ್ಣ(ಶಿವಮೊಗ್ಗ )
- ಎಂ.ಸಿ.ಮನಗೂಳಿ(ವಿಜಯಪುರ )
- ಜಿ.ಟಿ.ದೇವೇಗೌಡ(ಮೈಸೂರು )