ಕೊನೆಗೂ ಒಕ್ಕಲಿಗ ಸಂಘದ ಚುನಾವಣೆಗೆ ಮುಹೂರ್ತ ಫಿಕ್ಸ್
ದಿನಾಂಕ 6 ರಂದು ನಡೆದ ಸಂಘದ ಸಭೆಯಲ್ಲಿ ಅಪ್ಪಾಜಿ ಗೌಡ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಗದ್ದಲ ಉಂಟಾಗಿದಲ್ಲದೆ, ಅಪ್ಪಾಜಿಗೌಡರ ಪರ ಹಾಗೂ ವಿರೋಧಿ ಬಣಗಳ ವಿರುದ್ಧ ವಾಗ್ವಾದ ನಡೆದಿತ್ತು.
ಬೆಂಗಳೂರು (ಜ.17): ತೀವ್ರ ವಿರೋಧದ ನಡುವೆಯೂ ಒಕ್ಕಲಿಗ ಸಂಘದ ಚುನಾವಣೆಗೆ ದಿನಾಂಕ ನಿಗದಿಯಾಗಿದೆ.
ದಿನಾಂಕ 6 ರಂದು ನಡೆದ ಸಂಘದ ಸಭೆಯಲ್ಲಿ ಅಪ್ಪಾಜಿ ಗೌಡ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಗದ್ದಲ ಉಂಟಾಗಿದಲ್ಲದೆ, ಅಪ್ಪಾಜಿಗೌಡರ ಪರ ಹಾಗೂ ವಿರೋಧಿ ಬಣಗಳ ವಿರುದ್ಧ ವಾಗ್ವಾದ ನಡೆದಿತ್ತು.
ಇದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ ಅಪ್ಪಾಜಿಗೌಡರ ಬಣಕ್ಕೆ ಮುಖಭಂಗವಾಗಿದ್ದು, ಹೈಕೋರ್ಟ್, ಸುಪ್ರೀಂ ಕೋರ್ಟ್ ನಿಯಾಮಾವಳಿಗಳ ಅನುಸಾರ ಪ್ರಕರಣವನ್ನು ವಜಾಗೊಳಿಸಿ ಆದೇಶ ನೀಡಿದ್ದಾರೆ. ಇದರಿಂದಾಗಿ ನಾಳೆ ಬೆಳಗ್ಗೆ ಚುನಾವಣೆ ನಡೆಯುವುದು ಖಚಿತ ಎಂದು ಮಾಜಿ ಪ್ರಧಾನ ಕಾರ್ಯದರ್ಶಿ ಡಾ. ಕೆ ಮಹದೇವ್ ಹೇಳಿಕೆ ನೀಡಿದ್ದಾರೆ.