ಸಾಲಮನ್ನಾದ ನಿರೀಕ್ಷೆಯಲ್ಲಿದ್ದ ರೈತನೋರ್ವ  ತಾನು ಪಡೆದಿದ್ದ ಸಾಲಮನ್ನಾವಾಗದಿದ್ದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರದ ಕುದೇರು ಠಾಣಾ ವ್ಯಾಪ್ತಿಯ ದೇಮನಹಳ್ಳಿಯಲ್ಲಿ ನಡೆದಿದೆ. 

ಚಾಮರಾಜನಗರ: ಸಾಲಮನ್ನಾದ ನಿರೀಕ್ಷೆಯಲ್ಲಿದ್ದ ರೈತನೋರ್ವ ತಾನು ಪಡೆದಿದ್ದ ಸಾಲಮನ್ನಾವಾಗದಿದ್ದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುದೇರು ಠಾಣಾ ವ್ಯಾಪ್ತಿಯ ದೇಮನಹಳ್ಳಿಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಚಿಕ್ಕಸ್ವಾಮಿ(45) ಎಂಬ ರೈತ ಕಳೆದ ಫೆಬ್ರವರಿಯಲ್ಲಿ ಸಹಕಾರ ಸಂಘದಿಂದ 40 ಸಾವಿರ ರೂ. ಸಾಲ ಪಡೆದಿದ್ದರು ಎನ್ನಲಾಗಿದ್ದು, ಸಾಲಮನ್ನಾದ ಕುರಿತು ಬಹು ನಿರೀಕ್ಷೆ ಇಟ್ಟುಕೊಂಡಿದ್ದರು. 

ಕಳೆದ 8 ತಿಂಗಳಿನ ಹಿಂದೆ ಆಪರೇಷನ್ ಗಾಗಿ 70 ಸಾವಿರ, ಮಗುವಿನ ಚಿಕಿತ್ಸೆಗಾಗಿ 1 ಲಕ್ಷ ಖಾಸಗಿಯಾಗಿ ಸಾಲ ಮಾಡಿದ್ದ ಚಿಕ್ಕಸ್ವಾಮಿ ಅವರು ಸಾಲಕ್ಕೆ ಬೇಸತ್ತು ರಾತ್ರಿ 1 ರ ವೇಳೆಯಲ್ಲಿ ನೇಣು ಹಾಕಿಕೊಂಡಿದ್ದಾರೆ.

ನೇಣು ಹಾಕಿಕೊಂಡ ವಿಚಾರ ತಿಳಿಯುತ್ತಿದ್ದಂತೆ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.