ಸಿಎಂ ಹುದ್ದೆಗೆ ಇನ್ನುಮುಂದೆ ಪರ್ಯಾಯ? ಸುಳ್ ಸುದ್ದಿ
ಕರ್ನಾಟಕದಲ್ಲಿ ಇನ್ನುಮುಂದೆ ಮುಖ್ಯಮಂತ್ರಿ ಹುದ್ದೆಗೂ ಕೂಡ ಪರ್ಯಾಯ ನಡೆಸುವ ಬಗ್ಗೆ ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಸಮನ್ವಯ ಸಮಿತಿಯಲ್ಲಿ ತೀರ್ಮಾನವಾಗಿದೆ.
ಬೆಂಗಳೂರು : ವರ್ಷ ಪರ್ಯಾಯ ವ್ಯಕ್ತಿಗೆ ವಹಿಸಲು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ನಿರ್ಧರಿಸಿದೆ. ಕುಮಾರಸ್ವಾಮಿ ಬಳಿಕ ಮುಂದಿನ ಪರ್ಯಾಯ ಸಿಎಂ ಹುದ್ದೆಯನ್ನು ಸಿದ್ದರಾಮಯ್ಯ ಅಲಂಕರಿಸಲಿದ್ದಾರೆ. ಬಳಿಕ ಕ್ರಮವಾಗಿ ಎಚ್.ಡಿ.ರೇವಣ್ಣ, ಪರಮೇಶ್ವರ್ ವಹಿಸಿಕೊಳ್ಳಲಿದ್ದಾರೆ. ಕೊನೆಯ ಅವಧಿಗೆ ಸೂಕ್ತ ಅಭ್ಯರ್ಥಿ ಸಿಗದಿದ್ದರೆ ಕುಮಾರಸ್ವಾಮಿ ಅವರೇ ಮತ್ತೆ ಸಿಎಂ ಆಗಲಿದ್ದಾರೆ.
ಅದೇ ರೀತಿ ಉಪ ಮುಖ್ಯಮಂತ್ರಿ ಹುದ್ದೆಗೂ ಪರ್ಯಾಯ ಮುಖಂಡರನ್ನು ಆಯ್ಕೆ ಮಾಡಲಾಗುತ್ತದೆ. ಮುಂದಿನ ಪರ್ಯಾಯ ಡಿಸಿಎಂ ರೇವಣ್ಣ ಅವರಾಗಲಿದ್ದಾರೆ. ಬಳಿಕ ದೇಶಪಾಂಡೆ ಆಗುವ ಸಾಧ್ಯತೆ ಇದೆ ಎಂದು ಸುಳ್ಸುದ್ದಿ ಮೂಲಗಳು ತಿಳಿಸಿವೆ.