ರಾಜಕಾರಣಿಯೊಬ್ಬರಿಗೆ ಕಾಡಿದೆ ಹೆಚ್ಚು ಗ್ರಹಣ ದೋಷ?
ರಾಜ್ಯದ ಖ್ಯಾತ ಜ್ಯೋತಿಷಿಯೊಬ್ಬರು ರಾಜಕಾರ ಣಿಯೊಬ್ಬರ 150 ಗ್ರಹಣ ದೋಷಗಳನ್ನು ಹುಡುಕಿದ್ದಾರೆ.
ಬೆಂಗಳೂರು : ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಅತಿ ಹೆಚ್ಚು ಗ್ರಹಣ ದೋಷ ಹುಡುಕಿ ಜನರ ಸಂಕಷ್ಟಗಳನ್ನು ಪರಿಹರಿಸಿದ ಜ್ಯೋತಿಷಿಗಳನ್ನು ಸನ್ಮಾನಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಸರ್ಕಾರ ಅರ್ಹ ಜ್ಯೋತಿಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
100 ಕ್ಕೂ ಹೆಚ್ಚು ಗ್ರಹಣ ದೋಷ ಹುಡುಕಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅದಕ್ಕೆ ಪರಿಹಾರವನ್ನು ಜ್ಯೋತಿಷಿಗಳು ಸೂಚಿಸಬೇ ಕಾಗಿದೆ.
ರಾಜ್ಯದ ಖ್ಯಾತ ಜ್ಯೋತಿಷಿಯೊಬ್ಬರು ರಾಜಕಾರ ಣಿಯೊಬ್ಬರ 150 ಗ್ರಹಣ ದೋಷಗಳನ್ನು ಹುಡುಕಿದ್ದು ಪ್ರಶಸ್ತಿಯ ಫೇವರೇಟ್ ಎನಿಸಿದ್ದಾರೆ. 1000 ಕ್ಕೂ ಹೆಚ್ಚು ಜ್ಯೋತಿಷಿಗಳಿಂದ ಅರ್ಜಿ ಸಲ್ಲಿಕೆಯಾಗಿದ್ದು, ಇಂದು ಪ್ರಶಸ್ತಿ ಪುರಸ್ಕೃತರ ಐವರ ಹೆಸರನ್ನು ಘೋಷಿಸಲಾಗುತ್ತದೆ. ವಿಜೇತರಿಗೆ 10 ಲಕ್ಷ ರು. ಬಹು ಮಾನ ಸಿಗಲಿದೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.