ಕೇಂದ್ರದಿಂದ ಅನುದಾನ ಪಡೆಯುವ ವಿವಿಗಳು ಜಾತ್ಯಾತೀತ ವಿಶ್ವವಿದ್ಯಾಲಯವಾಗಿರಬೇಕು ಜೊತೆಗೆ ಧರ್ಮದ ಆಧಾರದಿಂದ ಮುಕ್ತವಾಗಿರಬೇಕು. ಯಾವುದೇ ರೀತಿಯ ಧಾರ್ಮಿಕ ಹೆಸರನ್ನು ಹೊಂದಿರಬಾರದು

ನವದೆಹಲಿ(ಅ.09): ಬನಾರಸ್ ಹಾಗೂ ಅಲಿಘಡ್ ವಿವಿಗಳು ಹಿಂದು ಮತ್ತು ಮುಸ್ಲಿಂ ಹೆಸರುಗಳನ್ನು ಬದಲಿಸುವಂತೆ ಯುಜಿಸಿ(ವಿಶ್ವವಿದ್ಯಾಲಯ ಧನಸಹಾಯ ಆಯೋಗ) ಮಂಡಳಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

Add Asianetnews Kannada as a Preferred SourcegooglePreferred

ಕೇಂದ್ರದಿಂದ ಅನುದಾನ ಪಡೆಯುವ ವಿವಿಗಳು ಜಾತ್ಯಾತೀತ ವಿಶ್ವವಿದ್ಯಾಲಯವಾಗಿರಬೇಕು ಜೊತೆಗೆ ಧರ್ಮದ ಆಧಾರದಿಂದ ಮುಕ್ತವಾಗಿರಬೇಕು. ಯಾವುದೇ ರೀತಿಯ ಧಾರ್ಮಿಕ ಹೆಸರನ್ನು ಹೊಂದಿರಬಾರದು ಎಂದು ಮಂಡಳಿ ತಿಳಿಸಿದೆ. ಅಲಿಘಡ ವಿವಿಗೆ ಅಲಿಘಡ ವಿವಿ ಅಥವಾ ಸಂಸ್ಥಾಪಕ ಸರ್ ಸಯ್ಯದ್ ಅಹಮದ್ ಖಾನ್ ಹೆಸರನ್ನು ಇಟ್ಟುಕೊಳ್ಳಬೇಕು ಎಂದು ಶಿಫಾರಸ್ಸು ಮಾಡಿದೆ. ಅದೇ ರೀತಿ ಬನಾರಸ್ ವಿವಿಯನ್ನು ಪುನರ್ ನಾಮಕರಣ ಮಾಡುವಂತೆ ಸೂಚಿಸಿದೆ.

ಅನುದಾನ ಪಡೆಯುವ 10 ಕೇಂದ್ರೀಯ ವಿವಿಗಳಲ್ಲಿ ನಡೆಯುತ್ತಿರುವ ಅಕ್ರಮಗಳ ದೂರುಗಳನ್ನು ಅವಲೋಕಿಸುವ ಸಲುವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ಇದೇ ಏಪ್ರಿಲ್'ನಲ್ಲಿ ಪ್ರತಿಷ್ಟಿತ ವಿವಿಗಳ ಶೈಕ್ಷಣಿಕ ಪರಿಣಿತರನ್ನು ಹೊಂದಿರುವ ಮಂಡಳಿ ರಚಿಸಿತ್ತು. ಅಲಿಗಢಮುಸ್ಲಿಂವಿವಿಯನ್ನು ಸರ್ಸಯ್ಯದ್ಅಹ್ಮದ್ಖಾನ್, ಹಿಂದೂಬನಾರಸ್ವಿಶ್ವವಿದ್ಯಾಲಯವನ್ನುಮದನಮೋಹನ್ಮಾಳವೀಯಸ್ಥಾಪಿಸಿದ್ದರು