ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಸಾಕ್ಷ್ಯನಾಶ ಪೊಲೀಸರಿಂದಲೇ ನಡೆದಿದೆ ಎಂಬ ಸ್ಫೋಟಕ ಮಾಹಿತಿ ಸುವರ್ಣ ನ್ಯೂಸ್ಗೆ ಲಭ್ಯವಾಗಿದೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ಲಾಡ್ಜ್'ನಲ್ಲಿನ ಸಿಸಿಟಿವಿಯ ಹಾರ್ಡ್ ಡಿಸ್ಕ್ ಬದಲಾವಣೆಯಾಗಿದೆ ಎನ್ನುವ ಅನುಮಾನವನ್ನು ನ್ಯಾ.ಕೆ.ಎನ್.ಕೇಶವ್ ನಾರಾಯಣ್ ಆಯೋಗ ವ್ಯಕ್ತಪಡಿಸಿದೆ. ಮತ್ತೊಂದೆಡೆ ಸಚಿವ ಕೆ.ಜೆ.ಚಾರ್ಜ್, ಪ್ರಣವ್ ಮೊಹಾಂತಿ, ಎಎಂ ಪ್ರಸಾದ್ ವಿಚಾರಣೆ ನಡೆಸದೇ ತನಿಖೆಯನ್ನು ಆಯೋಗ ಮುಕ್ತಾಯಗೊಳಿಸಿದೆ. ಆಯೋಗದ ಮುಂದೆ ಅನಾವರಣಗೊಂಡ ಕೆಲ ಸ್ಟೋಟಕ ಸತ್ಯಗಳ ಮಾಹಿತಿ ಇಲ್ಲಿದೆ.
ಬೆಂಗಳೂರು (ನ.24): ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಸಾಕ್ಷ್ಯನಾಶ ಪೊಲೀಸರಿಂದಲೇ ನಡೆದಿದೆ ಎಂಬ ಸ್ಫೋಟಕ ಮಾಹಿತಿ ಸುವರ್ಣ ನ್ಯೂಸ್ಗೆ ಲಭ್ಯವಾಗಿದೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ಲಾಡ್ಜ್'ನಲ್ಲಿನ ಸಿಸಿಟಿವಿಯ ಹಾರ್ಡ್ ಡಿಸ್ಕ್ ಬದಲಾವಣೆಯಾಗಿದೆ ಎನ್ನುವ ಅನುಮಾನವನ್ನು ನ್ಯಾ.ಕೆ.ಎನ್.ಕೇಶವ್ ನಾರಾಯಣ್ ಆಯೋಗ ವ್ಯಕ್ತಪಡಿಸಿದೆ. ಮತ್ತೊಂದೆಡೆ ಸಚಿವ ಕೆ.ಜೆ.ಚಾರ್ಜ್, ಪ್ರಣವ್ ಮೊಹಾಂತಿ, ಎಎಂ ಪ್ರಸಾದ್ ವಿಚಾರಣೆ ನಡೆಸದೇ ತನಿಖೆಯನ್ನು ಆಯೋಗ ಮುಕ್ತಾಯಗೊಳಿಸಿದೆ. ಆಯೋಗದ ಮುಂದೆ ಅನಾವರಣಗೊಂಡ ಕೆಲ ಸ್ಟೋಟಕ ಸತ್ಯಗಳ ಮಾಹಿತಿ ಇಲ್ಲಿದೆ.
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ಲಾಡ್ಜ್ ಸಿಸಿ ಕ್ಯಾಮರ ವಿಷುವಲ್ಸ್ ನಾಪತ್ತೆ ಸಂಬಂಧ ಸ್ಟೋಟಕ ಮಾಹಿತಿ ಹೊರಬಿದ್ದಿದೆ. 2016ರ ಜುಲೈ 7 ರಂದು ವಿನಾಯಕ ಲಾಡ್ಜ್ನ ವಿಷ್ಯೂವಲ್ಸ್ ರೆಕಾರ್ಡ್ ಆಗಿಲ್ಲ ಎಂದು ತನಿಖೆ ನಡೆಸಿದ ಪೊಲೀಸರು ಹೇಳುತ್ತಿದ್ದಾರೆ. ಜುಲೈ 6 ಹಾಗೂ 8ನೇ ತಾರೀಖಿನ ವಿಷ್ಯುವಲ್ಸ್ ಇದೆ ಆಂದರೆ 7 ನೇ ತಾರೀಖಿನಂದು ರೆಕಾರ್ಡ್ ಆಗಿಲ್ಲ ಅನ್ನೋದು ನಂಬಲು ಸಾಧ್ಯನಾ..? ಲಾಡ್ಜ್ನಲ್ಲಿ ಸೀಜ್ ಮಾಡಿದ್ದ ಡಿವಿಆರ್ನ ಹಾರ್ಡ್ ಡಿಸ್ಕ್ ಬದಲಾವಣೆ ಮಾಡಿ ಹಳೆಯ ವಿಷುವಲ್ಸ್ ಹಾಗೂ ಜುಲೈ 6 ಮತ್ತು 8 ವಿಷುವಲ್ಸ್ ಹಾಕಿಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಪೊಲೀಸರು ಮಾಡಬೇಕಾದ ಅಗತ್ಯ ಪ್ರಕ್ರಿಯೆಗಳಲ್ಲಿ ಎಡವಿದ್ದಲ್ಲದೇ, ಸಾಕ್ಷ್ಯ ನಾಶ ಮಾಡಿದ್ದಾರೆ ಎಂಬ ಆರೋಪಕ್ಕೂ ಪುಷ್ಠಿ ಸಿಕ್ಕಿದೆ. ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ದಿನದಂದು ಲಾಡ್ಜ್ ರೂನಲ್ಲಿ ಸಿಕ್ಕ ಎಲ್ಲಾ ವಸ್ತುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಆದ್ರೆ ಗಣಪತಿ ಮೊಬೈಲ್ ಮಾತ್ರ ಸೀಜ್ ಮಾಡಿಲ್ಲ. ಆ ಮೊಬೈಲ್ನ ಎಲ್ಲಾ ಡಾಟಾ ಡಿಲೀಟ್ ಆಗಿದ್ದು, ಡಿಲೀಟ್ ಮಾಡಿದವರು ಮಡಿಕೇರಿ ಪೊಲೀಸರಾ..? ಸಿಐಡಿ ಪೊಲೀಸರ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಜೊತೆ ಪೋಸ್ಟ್ ಮಾರ್ಟಂ ಸಂಬಂಧ ಡಾ.ಶೈಲಜ ನೀಡಿದ್ದ ಪ್ರಾಥಮಿಕ ವರದಿಯನ್ನ ಮಾತ್ರ ಪರಿಗಣಿಸಿದ್ದು, ಎಫ್ಎಸ್ಎಲ್ ವರದಿ ಬಂದ ನಂತರ ಅಂತಿಮವಾಗಿ ವೈದ್ಯರ ಅಭಿಪ್ರಾಯ ಸಂಗ್ರಹಣೆ ಮಾಡದೇ, ಸಿಐಡಿ ಬಿ ರಿಪೋರ್ಟ್ ಸಲ್ಲಿಸಿತ್ತು.
ಗಣಪತಿ ಸಾವಿನ ಸತ್ಯ ಕಂಡುಕೊಳ್ಳಲು ರಾಜ್ಯ ಸರ್ಕಾರವೇ ನೇಮಿಸಿದ್ದ ನ್ಯಾ.ಕೆ.ಎನ್.ಕೇಶವ್ ನಾರಾಯಣ್ ಆಯೋಗದ ತನಿಖೆಯೂ ಮುಕ್ತಾಯವಾಗಿದೆ. ತನಿಖೆ ನಡೆಸಿದ್ದ ಅಧಿಕಾರಿಗಳು ಸೇರಿ 49 ಮಂದಿ ಹೇಳಿಕೆ, ಹಾಗೂ ಸಾಕ್ಷ್ಯಗಳ ಆಧಾರದ ಮೇಲೆ ವರದಿ ಸಿದ್ದಗೊಳ್ಳುತ್ತಿದೆ. ಅಚ್ಚರಿ ಎಂದರೆ, ಸಚಿವ ಕೆ.ಜೆ.ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ ಹಾಗೂ ಎ.ಎಂ.ಪ್ರಸಾದ್ ಹೇಳಿಕೆ ಪಡೆಯದೇ ವಿಚಾರಣೆ ಮುಕ್ತಾಯವಾಗಿದೆ. ಇನ್ನೊಂದೆಡೆ ಆಯೋಗವೇ ನೋಟಿಸ್ ನೀಡದ್ರೂ, ಗಣಪತಿ ತಂದೆ ಕುಶಾಲಪ್ಪ, ಸಹೋದರ ಮಾಚಯ್ಯ ಹಾಗೂ ಸಹೋದರಿ ಸಬಿತಾ ಆಯೋಗಕ್ಕೆ ತಮ್ಮ ಹೇಳಿಕೆ ನೀಡಲು ಹಾಜರಾಗಿಲ್ಲ. ಇನ್ನು ಸಚಿವರು ಹಾಗೂ ಐಪಿಎಸ್ ಅಧಿಕಾರಿಗೆ ಕ್ಲೀನ್ಚಿಟ್ ನೀಡಿದ್ದ ಸಿಐಡಿ ಡಿವೈಎಸ್ಪಿ ಶ್ರೀಧರ್ ಕೂಡ ಆಯೋಗದ ಮುಂದೆ ಹಾಜರಾಗಿಲ್ಲ. ಈಗ ಆಯೋಗ ತನ್ನ ತನಿಖೆ ಅಂತ್ಯಗೊಳಿಸಿದ್ದು, ಡಿಸೆಂಬರ್ ಕೊನೆ ವಾರದಲ್ಲಿ ವರದಿ ಸರ್ಕಾರ ಕೈಸೇರಲಿದೆ. ಒಟ್ಟಾರೆ, ತನಿಖೆ ನಡೆಸಿದ್ದ ಮಡಿಕೇರಿ ಪೊಲೀಸರು ಹಾಗೂ ಸಿಐಡಿ ಪೊಲೀಸರು ಸಾಕ್ಷ್ಯನಾಶ ಮಾಡಿದ್ದಾರೆ ಅನ್ನೋ ಸಂಬಂಧ ಹಲವು ಸಾಕ್ಷ್ಯಗಳನ್ನು ಆಯೋಗ ಕಲೆಹಾಕಿದೆ ಎಂದು ತಿಳಿದುಬಂದಿದೆ.
