Asianet Suvarna News Asianet Suvarna News

ಕಾಂಗ್ರೆಸ್ ನ ಯಾರ್ಯಾರಿಗೆ ಬಿಜೆಪಿಯಿಂದ ಗಾಳ..?

ಬಿಜೆಪಿಯು ಯಾರನ್ನು ಸಂಪರ್ಕ ಮಾಡಿದೆ ಎನ್ನುವ ವಿಚಾರ ತಮಗೆ ತಿಳಿದಿದೆ.  ಸಮಯ ಬಂದಾಗ ಈ ವಿಚಾರಗಳು ತಾನಾಗೇ ಬಹಿರಂಗವಾಗಲಿವೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್  ತಿಳಿಸಿದ್ದಾರೆ. 

DK Shivakumar Slams BS Yeddyurappa
Author
Bengaluru, First Published Aug 31, 2018, 11:54 AM IST

ಬೆಂಗಳೂರು: ಬಿಜೆಪಿಯವರು ಯಾರಿಗೆಲ್ಲಾ ಆಮಿಷ ಒಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ಕಾಂಗ್ರೆಸ್‌ನ ಯಾವ ಶಾಸಕರೊಂದಿಗೆ ಅವರು ಸಂಪರ್ಕದಲ್ಲಿದ್ದಾರೆ ಎಂಬ ಸಂಗತಿಯೂ ಗೊತ್ತಿದೆ. ಸಮಯ ಬಂದಾಗ ಈ ವಿಚಾರಗಳು ತಾನಾಗೇ ಬಹಿರಂಗವಾಗಲಿವೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್  ತಿಳಿಸಿದ್ದಾರೆ. 

ಕಾಂಗ್ರೆಸ್‌ನ ಪ್ರಭಾವಿ ವ್ಯಕ್ತಿಗಳು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಗೆ ವಿಧಾನಸೌಧದಲ್ಲಿ ಗುರುವಾರ ಪ್ರತಿಕ್ರಿಯೆ ನೀಡಿದ ಅವರು, ಇಂತಹ ರಾಜಕಾರಣವನ್ನು ಮಾಡುವುದು ಬಿಜೆಪಿಯವರು ಮೊದಲು ಬಿಡಬೇಕು. 

ಯಾರಿಗೆಲ್ಲಾ ಆಮಿಷ ಒಡ್ಡುತ್ತಿದ್ದಾರೆ ಎಂಬುದು ಗೊತ್ತಿದೆ. ಯಾವ ಶಾಸಕರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಸಂಗತಿ ನಮಗೆ ಗೊತ್ತಿಲ್ಲ ಎಂದು ಬಿಜೆಪಿಯವರು ತಿಳಿದುಕೊಂಡಿದ್ದಾರೆ. ನಮಗೆ ಎಲ್ಲಾ ಮಾಹಿತಿಯೂ ಇದೆ. ಸಮಯ ಬಂದಾಗ ಯಾರು ಯಾರ ಜತೆ ಮಾತನಾಡಿದ್ದಾರೆ ಎಂಬುದು ತಾನಾಗಿಯೇ ಬಹಿರಂಗವಾಗಲಿದೆ ಎಂದು ಸೂಚ್ಯವಾಗಿ ಹೇಳಿದರು.

Follow Us:
Download App:
  • android
  • ios