ಅತೃಪ್ತ ಶಾಸಕರ ಮೇಲೆ ಡಿಕೆಶಿಗೆ ಇನ್ನೂ ಇದೆ ನಂಬಿಕೆ| ಅವರೆಲ್ಲಾ ನೈಜ ಕಾಂಗ್ರೆಸ್ಸಿಗರು ಎಂದ ಟ್ರಬಲ್ ಶೂಟರ್| ‘ತಮ್ಮ ಕ್ಷೇತ್ರದಲ್ಲಿ ಗೆಲುವಿಗಾಗಿ ಹುಲಿಯಂತೆ ಕಾದಾಡಿದ್ದಾರೆ’| ಅತೃಪ್ತರು ಸರ್ಕಾರ ಉಳಿಸಲಿದ್ದಾರೆ ಎಂದ ಡಿಕೆ ಶಿವಕುಮಾರ್| ವಿಪ್ ಉಲ್ಲಂಘಿಸಿದರೆ ಅನರ್ಹತೆ ಎಂದು ಎಚ್ಚರಿಸಿದ ಡಿಕೆಶಿ|

ಬೆಂಗಳೂರು(ಜು.14): ವಿಶ್ವಾಸಮತ ಯಾಚನೆ ವೇಳೆ ಅತೃಪ್ತ ಶಾಸಕರು ಸರ್ಕಾರದ ಪರ ಮತ ಚಲಾಯಿಸಲಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಡಿಕೆಶಿ, ಮುಂಬೈನಲ್ಲಿರುವ ಅತೃಪ್ತ ಶಾಸಕರು ನೈಜ ಕಾಂಗ್ರೆಸ್ಸಿಗರಾಗಿದ್ದು ತಮ್ಮ ಕ್ಷೇತ್ರದಲ್ಲಿ ಗೆಲುವಿಗಾಗಿ ಹುಲಿಯಂತೆ ಕಾದಾಡಿದ್ದಾರೆ ಎಂದು ಹೇಳಿದ್ದಾರೆ.

Scroll to load tweet…

ಅತೃಪ್ತ ಶಾಸಕರು ಶೀಘ್ರದಲ್ಲೇ ಮರಳಲಿದ್ದು, ಸಮ್ಮಿಶ್ರ ಸರ್ಕಾರವನ್ನು ಉಳಿಸುವ ಕೆಲಸ ಮಾಡಲಿದ್ದಾರೆ ಎಂದು ಡಿಕೆಶಿ ಭರವಸೆ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಅತೃಪ್ತ ಶಾಸಕರಿಗೆ ಎಚ್ಚರಿಕೆಯನ್ನೂ ನೀಡಿರುವ ಡಿಕೆಶಿ, ಕಾಂಗ್ರೆಸ್ ತನ್ನೆಲ್ಲಾ ಶಾಸಕರಿಗೂ ವಿಪ್ ಜಾರಿ ಮಾಡಿದ್ದು ಒಂದು ವೇಳೆ ಯಾರಾದರೂ ಸರ್ಕಾರದ ವಿರುದ್ಧ ಮತ ಚಲಾಯಿಸಿದರೆ ಅವರ ಶಾಸಕತ್ವ ಅನರ್ಹಗೊಳ್ಳಲಿದೆ ಎಂದು ಹೇಳಿದ್ದಾರೆ.