ಲೋಕಸಭಾ ಚುನಾವಣೆಗೆ ಉಡುಪಿಯಿಂದ ಸ್ಪರ್ಧಿಸಲು ಶೋಭಾ ಕರಂದ್ಲಾಜೆ ರೆಡಿ | ಕಮಲ ಪಾಳಯದಲ್ಲಿ ಎದ್ದಿದೆ ಭಿನ್ನಾಭಿಪ್ರಾಯ | ಬಿಜೆಪಿ ನಾಯಕರ್ಯಾಕೆ ಕ್ಯಾತೆ ತೆಗೆಯುತ್ತಿದ್ದಾರೆ? ಇಲ್ಲಿದೆ ಕಾರಣ. 

ಬೆಂಗಳೂರು (ಫೆ. 20): 3 ತಿಂಗಳ ಹಿಂದೆ ಉಡುಪಿಯಿಂದ ಲೋಕಸಭೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದ ಶೋಭಾ ಕರಂದ್ಲಾಜೆ ಈಗ ನಾನು ಅಲ್ಲಿಂದಲೇ ಸ್ಪರ್ಧಿಸುತ್ತೇನೆ ಎನ್ನುತ್ತಿದ್ದಾರೆ. ಆದರೆ ಸ್ಥಳೀಯ ಶಾಸಕರಾದ ಸಿ ಟಿ ರವಿ, ಸುನೀಲ್ ಕುಮಾರ್, ರಘುಪತಿ ಭಟ್ ಅವರ ಆಯ್ಕೆ ಜಯಪ್ರಕಾಶ್ ಹೆಗ್ಡೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲೋಕಸಭಾ ಚುನಾವಣೆ : ಪ್ರಕಾಶ್ ರೈಗೆ ಕಾಂಗ್ರೆಸ್ ಬೆಂಬಲ..?

ಹೆಗ್ಡೆ ಅವರಿಗೇ ಟಿಕೆಟ್ ಕೊಡಿ ಎಂದು ಶಾಸಕರು ಹೇಳುತ್ತಿದ್ದಾರೆ. ಆದರೆ ಆರ್‌ಎಸ್‌ಎಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ಮಾತ್ರ ಶೋಭಾಗೆ ಟಿಕೆಟ್ ಕೊಡಲೇಬೇಕು ಎನ್ನುತ್ತಿದ್ದಾರೆ. ಅದೇನೇ ಇರಲಿ ಶೋಭಾ ಇದ್ದಲ್ಲಿ ಸುದ್ದಿ ಇರುತ್ತದೆ ಮಾರಾಯ್ರೆ!

- ಪ್ರಶಾಂತ್ ನಾತು, 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ