ನಮ್ಮ ರಾಜ್ಯದೊಳಗೆ ತಮಿಳುನಾಡಿನ ಕಾವೇರಿಪಟ್ಟಣಂನಿಂದ ಕಿಲ್ಲರ್​ ಖೋವಾ ಸ್ಮಗ್ಲಿಂಗ್​ ಭರ್ಜರಿಯಾಗಿ ನಡೆಯುತ್ತಿದೆ. ನಮ್ಮ ಸುವರ್ಣನ್ಯೂಸ್ ಕವರ್​ಸ್ಟೋರಿ ತಂಡ ತಮಿಳುನಾಡಿನ ಕಾವೇರಿಪಟ್ಟಣಂಗೆ ತೆರಳಿ, ಅಲ್ಲಿನ ಖೋವಾ ಫ್ಯಾಕ್ಟರಿಯೊಳಗೆ ರಹಸ್ಯ ಕಾರ್ಯಾಚರಣೆ ನಡೆಸಿದೆ.

ಬೆಂಗಳೂರು(ಸೆ.23): ನಮ್ಮ ರಾಜ್ಯದೊಳಗೆ ತಮಿಳುನಾಡಿನ ಕಾವೇರಿಪಟ್ಟಣಂನಿಂದ ಕಿಲ್ಲರ್​ ಖೋವಾ ಸ್ಮಗ್ಲಿಂಗ್​ ಭರ್ಜರಿಯಾಗಿ ನಡೆಯುತ್ತಿದೆ. ನಮ್ಮ ಸುವರ್ಣನ್ಯೂಸ್ ಕವರ್​ಸ್ಟೋರಿ ತಂಡ ತಮಿಳುನಾಡಿನ ಕಾವೇರಿಪಟ್ಟಣಂಗೆ ತೆರಳಿ, ಅಲ್ಲಿನ ಖೋವಾ ಫ್ಯಾಕ್ಟರಿಯೊಳಗೆ ರಹಸ್ಯ ಕಾರ್ಯಾಚರಣೆ ನಡೆಸಿದೆ.

ಫ್ರೆಶ್​ ಹಾಲನ್ನ ಕುದಿಸಿ ತಯಾರಿಸಬೇಕಾದ ಖೋವಾವನ್ನ ಇಲ್ಲಿನ ಕೆಲ ಫ್ಯಾಕ್ಟರಿಗಳು ಹಾಳಾದ, ದಿನಾಂಕ ಕಳೆದಿರೋ ಹಾಲಿನ ಪೌಡರಿಂದ ತಯಾರಿಸ್ತಿದ್ದಾರೆ. ಈ ಸೀಕ್ರೆಟನ್ನ ಸ್ವತಃ ಫ್ಯಾಕ್ಟರಿ ಸಿಬ್ಬಂದಿಯೇ ಬಾಯ್ಬಿಟ್ಟಿದ್ದಾರೆ. ಇನ್ನು ಖೋವಾಗೆ ಸೋಡಾಪುಡಿ, ಅಜಿನಮೋಟ, ಮಿತಿಮೀರಿ ಸಕ್ಕರೆ ಡೆಡ್ಲಿ ಕಲರ್​ ಸೇರಿದಂತೆ ಇನ್ನೂ ಅನೇಕ ಡೆಡ್ಲಿ ರಾಸಾಯನಿಕಗಳನ್ನ ಬಳಸುತ್ತಾರೆ. ಇಂಥಾ ಕಿಲ್ಲರ್​ ಖೋವಾ, ಕಲಾಕಂದ್​, ಬರ್ಫಿ ಸರಬರಾಜಾಗೋದು ನಮ್ಮ ರಾಜ್ಯ ಹಾಗೂ, ಮುಖ್ಯವಾಗಿ ನಮ್ಮ ರಾಜಧಾನಿ ಬೆಂಗಳೂರಿಗೆ ಅನ್ನೋ ಶಾಕಿಂಗ್ ನ್ಯೂಸ್ ಬಯಲಾಗಿದೆ.

ಇದನ್ನ ತಡೆಯಲು ನಮ್ಮ ಕವರ್​ಸ್ಟೋರಿ ತಂಡ, ಕಾವೇರಿಪಟ್ಟಣಂನಿಂದ ಸ್ಮಗ್ಲಿಂಗ್ ಮಾಡುತ್ತಿದ್ದ ಲಾರಿಗಳನ್ನ ನಡುರಾತ್ರಿಯಲ್ಲಿ ಚೇಸ್​ ಮಾಡಿ ಆಹಾರ ಸುರಕ್ಷತಾ ಇಲಾಖೆ ಜಂಟಿ ನಿರ್ದೇಶಕ ಡಾ.ಹರ್ಷವರ್ಧನ್​ ನೇತೃತ್ವದ ತಂಡಕ್ಕೆ ಒಪ್ಪಿಸಿ, ಟನ್​ಗಟ್ಟಲೆ ಕೆಮಿಕಲ್​ ಖೋವಾ ತುಂಬಿದ ಲಾರಿಗಳನ್ನ ಸೀಜ್​ ಮಾಡಿಸಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಡಿದೆ.