ಜಿಲ್ಲೆಯಲ್ಲಿ ಪ್ರಸ್ತುತ ವಾಡಿಕೆಗಿಂತ ಹೆಚ್ಚಾಗಿ ಮಳೆ ಬೀಳುತ್ತಿದ್ದರೂ ಬಿತ್ತನೆ ಕಾರ್ಯ ಚುರುಕಾಗಿಲ್ಲ . ಜತೆಗೆ ಉಳುಮೆ ಮಾಡದೇ ಬೀಳು ಬಿಡೋದು ಕರ್ನಾಟಕ ಭೂ ಕಂದಾಯ ಕಾಯ್ದೆ ಹಾಗೂ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ವಿರುದ್ಧ ಅನ್ನೋದು ಜಿಲ್ಲಾಧಿಕಾರಿಗಳ ವಾದ. ಹೀಗಾಗಿ ಬಿತ್ತನೆ ಮಾಡದ ರೈತರುಗಳ ವಿರುದ್ದ ಭೂಸುಧಾರಣಾ ಕಾಯ್ದೆ 1961ರ ಸೆಕ್ಷನ್ 84ರ ರೀತ್ಯಾ ನೋಟೀಸ್ ನೀಡಿ ಕ್ರಮ ಕೈಗೊಳ್ಳೋದಾಗಿ ಪ್ರಕಟಣೆ ಹೊರಡಿಸಿದ್ದಾರೆ.
ಚಾಮರಾಜ ನಗರ(ಮೇ.20): ಹಿಂಗಾರು, ಮುಂಗಾರು, ಋತುಮಾನ ಆಧರಿಸಿ ರೈತರು ಬೆಳೆ ಬೆಳೆಯೋದು ರೂಢಿಗತ. ಆದರೆ ಚಾಮರಾಜನಗರದ ಡಿಸಿ ಒಂದು ಹೆಜ್ಜೆ ಮುಂದೆ ಹೋಗಿ ಮಳೆ ಬಂದರೂ ಬಿತ್ತನೆ ಯಾಕೆ ಮಾಡ್ತಿಲ್ಲ ಅಂತಾ ರೈತರಿಗೇ ವಿವಾದಾತ್ಮಕ ನೋಟೀಸ್ ಜಾರಿ ಮಾಡಿದ್ದಾರೆ.
ಗಡಿ ಜಿಲ್ಲೆ ಚಾಮರಾಜನಗರ ಪ್ರಮುಖವಾಗಿ ಕೃಷಿ ಆಧರಿತ ಭೂಪ್ರದೇಶ. ಅನಾದಿಕಾಲದಿಂದಲೂ ರೈತರು ಋತುಮಾನವನ್ನ ಆಧರಿಸಿ ಬೆಳೆ ಬೆಳೆಯುತ್ತಾ ಬಂದಿದ್ದಾರೆ. ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗ್ತಿದೆ. ಇಷ್ಟಾದ್ರೂ ಕೃಷಿ ಚಟುವಟಿಕೆಗಳು ಗರಿಗೆದರಿಲ್ಲ, ಮಳೆ ಬಂದರೂ ಬಿತ್ತನೆ ಮಾಡ್ತಿಲ್ಲ ಅಂತಾ ಜಿಲ್ಲಾಧಿಕಾರಿ ಬಿ. ರಾಮು ವಿವಾದಾತ್ಮಕ ನೋಟೀಸ್ ಜಾರಿ ಮಾಡಿ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರೈತರ ಆಕ್ರೋಶ
ಬಿತ್ತನೆ ಮಾಡದ ರೈತರ ವಿರುದ್ದ ಕರ್ನಾಟಕ ಭೂಸುಧಾರಣಾ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವಿವಾದಾತ್ಮಕ ಆದೇಶ ನೀಡಿದ್ದಾರೆ. ಇದರಿಂದ ರೊಚ್ಚಿಗೆದ್ದಿರೋ ರೈತ ಮುಖಂಡರು ಜಿಲ್ಲಾಧಿಕಾರಿಗಳಿಂದ ಹೇಳಿಸಿಕೊಂಡು ಬಿತ್ತನೆ ಮಾಡುವಂತಹ ಅಗತ್ಯತೆ ನಮಗಿಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಸ್ತುತ ವಾಡಿಕೆಗಿಂತ ಹೆಚ್ಚಾಗಿ ಮಳೆ ಬೀಳುತ್ತಿದ್ದರೂ ಬಿತ್ತನೆ ಕಾರ್ಯ ಚುರುಕಾಗಿಲ್ಲ . ಜತೆಗೆ ಉಳುಮೆ ಮಾಡದೇ ಬೀಳು ಬಿಡೋದು ಕರ್ನಾಟಕ ಭೂ ಕಂದಾಯ ಕಾಯ್ದೆ ಹಾಗೂ ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ವಿರುದ್ಧ ಅನ್ನೋದು ಜಿಲ್ಲಾಧಿಕಾರಿಗಳ ವಾದ. ಹೀಗಾಗಿ ಬಿತ್ತನೆ ಮಾಡದ ರೈತರುಗಳ ವಿರುದ್ದ ಭೂಸುಧಾರಣಾ ಕಾಯ್ದೆ 1961ರ ಸೆಕ್ಷನ್ 84ರ ರೀತ್ಯಾ ನೋಟೀಸ್ ನೀಡಿ ಕ್ರಮ ಕೈಗೊಳ್ಳೋದಾಗಿ ಪ್ರಕಟಣೆ ಹೊರಡಿಸಿದ್ದಾರೆ. ಇದೇ ವಿಚಾರವಾಗಿ ಕೃಷಿ ಇಲಾಖೆ ಕರೆದಿದ್ದ ಸಭೆಯನ್ನ ರೈತ ಮುಖಂಡರು ಬಹಿಷ್ಕರಿಸಿ ಹೊರನಡೆದಿದ್ದಾರೆ. ಒಟ್ಟಿನಲ್ಲಿ, ನೊಂದು ಬೆಂದಿರೊ ರೈತರ ಮೇಲೆ ಜಿಲ್ಲಾಧಿಕಾರಿ ಕಾನೂನಿನ ಅಸ್ತ್ರ ಪ್ರಯೋಗಿಸ್ತಿರೋದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ವರದಿ: ಶಶಿಧರ ಕೆ.ವಿ. ಸುವರ್ಣ ನ್ಯೂಸ್
