ಚಾಲೆಂಜಿಂಗ್ ಸ್ಟಾರ್ ತಂಡದಲ್ಲಿ ನಿರ್ದೇಶಕರಾದ ಶಿವಮಣಿ, ಹೆಚ್.ವಾಸು ಸೇರಿದಂತೆ 30 ಜನ ಮಂದಿ ಇದ್ದು, ಇರುಮುಡಿ ಮುಗಿದ ನಂತರ ದರ್ಶನ್ ಅಂಡ್ ಟೀಮ್ ಶಬರಿಮಲೆಗೆ ಯಾತ್ರೆಗೆ ಹೊರಡಲಿದ್ದಾರೆ

ಬೆಂಗಳೂರು(ಏ.06): ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ತಂಡದಿಂದ ಶ್ರೀರಾಂಪುರದ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಇರುಮುಡಿ ಕಟ್ಟುವ ಕಾರ್ಯ ನಡೆಯುತ್ತಿದ್ದು, ನಾಳೆ ಬೆಳಗ್ಗೆ 10 ಗಂಟೆ ವೇಳೆಗೆ ಶಬರಿಮಲೆಗೆ ತೆರಳಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ತಂಡದಲ್ಲಿ ನಿರ್ದೇಶಕರಾದ ಶಿವಮಣಿ, ಹೆಚ್.ವಾಸು ಸೇರಿದಂತೆ 30 ಜನ ಮಂದಿ ಇದ್ದು, ಇರುಮುಡಿ ಮುಗಿದ ನಂತರ ದರ್ಶನ್ ಅಂಡ್ ಟೀಮ್ ಶಬರಿಮಲೆಗೆ ಯಾತ್ರೆಗೆ ಹೊರಡಲಿದ್ದಾರೆ. ಅಯ್ಯಪ್ಪ ಸ್ವಾಮಿ ದರ್ಶನದ ನಂತರ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ 8ನೇ ತಾರೀಖಿನಂದು ದರ್ಶನ್ ತಂಡ ವಾಪಸ್ಸಾಗಲಿದ್ದಾರೆ.

Add Asianetnews Kannada as a Preferred SourcegooglePreferred