ಇಂಧನ ಸಚಿವ ಡಿ.ಕೆ. ಶಿವಕುಮಾರ ಅವರ ಸಹಭಾಗಿತ್ವದ್ದು ಎನ್ನಲಾದ ಚಿರಸ್ಥಾಯಿ ಕಂಪನಿ ಗಂಗಾವತಿ ತಾಲೂಕಿನ ತಿಪ್ಪನಾಳ ಗ್ರಾಮದ ಬಳಿ ಸ್ಥಾಪಿಸುತ್ತಿದ್ದ ಸೋಲಾರ್ ಘಟಕಕ್ಕೆ ದಲಿತ ಸಂಘಟನೆಗಳ ಕಾರ್ಯಕರ್ತರು (ಘಟಕ) ಬೀಗ ಜಡಿದಿದ್ದಾರೆ.

ಕೊಪ್ಪಳ: ಇಂಧನ ಸಚಿವ ಡಿ.ಕೆ. ಶಿವಕುಮಾರ ಅವರ ಸಹಭಾಗಿತ್ವದ್ದು ಎನ್ನಲಾದ ಚಿರಸ್ಥಾಯಿ ಕಂಪನಿ ಗಂಗಾವತಿ ತಾಲೂಕಿನ ತಿಪ್ಪನಾಳ ಗ್ರಾಮದ ಬಳಿ ಸ್ಥಾಪಿಸುತ್ತಿದ್ದ ಸೋಲಾರ್ ಘಟಕಕ್ಕೆ ದಲಿತ ಸಂಘಟನೆಗಳ ಕಾರ್ಯಕರ್ತರು (ಘಟಕ) ಬೀಗ ಜಡಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿರ್ಮಾಣ ಹಂತದಲ್ಲಿಯೇ ವಿವಾದಕ್ಕೆ ಸಿಲುಕಿರುವ ಈ ಘಟಕಕ್ಕೆ ಪ್ರಗತಿಪರ ಸಂಘಟನೆಗಳು ಬೀಗ ಜಡಿದಿದ್ದರಿಂದ ಕಾಮಗಾರಿಯನ್ನು ಕಳೆದೆರಡು ದಿನಗಳಿಂದ ಸ್ಥಗಿತ ಮಾಡಲಾಗಿದೆ. ಸುಮಾರು 28 ದಲಿತ ಕುಟುಂಬಗಳು ಹಲವು ವರ್ಷದಿಂದ ಉಳುಮೆ ಮಾಡುತ್ತಿರುವ ಈ ಭೂಮಿ ಕುರಿತ ವಿವಾದ ಎಸ್‌ಸಿ, ಎಸ್‌ಟಿ ಆಯೋಗದ ನ್ಯಾಯಾಲಯ ಮೆಟ್ಟಿಲೇರಿತ್ತು.

ಯಥಾಸ್ಥಿತಿ ಕಾಯ್ದುಕೊಳ್ಳವಂತೆ ಕೋರ್ಟ್ ಆದೇಶ ಮಾಡಿದ್ದರೂ ಜಿಲ್ಲಾಡಳಿತ ನುಣಚಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪ್ರತಿಭಟನಾಕಾರರು ಪ್ಲಾಂಟ್‌ಗೆ ಬೀಗ ಜಡಿದಿದ್ದಾರೆ. ಈ ದಲಿತ ಕುಟುಂಬಗಳನ್ನು ಒಕ್ಕಲಬ್ಬಿಸಿ ಇಲ್ಲಿ ಚಿರಸ್ಥಾಯಿ ಕಂಪನಿ ಸೋಲಾರ್ ಪ್ಲಾಂಟ್ ನಿರ್ಮಿಸಲಾಗುತ್ತಿದೆ. ಈ ಭೂಮಿ ನಮ್ಮದೆಂದು ಚಿರಸ್ಥಾಯಿ ಕಂಪನಿಗೆ ಭೂಮಿಯನ್ನು ಗುತ್ತಿಗೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.