ಪೆಟ್ರೋಲ್ ಬಂಕ್ನವರು ನಿಮಗೆ ಗೊತ್ತಿಲ್ಲದೇ ನಿಮ್ಮ ಜೇಬಿಗೆ ಕನ್ನ ಹಾಕಿ , ಕೊಟ್ಯಾಂತರ ರೂಪಾಯಿ ಲೂಟಿ ಮಾಡುತ್ತಿದ್ದಾರೆ.
ರಾಜ್ಯದ ಕೆಲ ಪೆಟ್ರೋಲ್ ಬಂಕ್ಗಳು ಮಾಡುತ್ತಿರೋ ಭಾರೀ ವಂಚನೆಯೊಂದನ್ನ ಸುವರ್ಣ ನ್ಯೂಸ್ ಕವರ್ಸ್ಟೋರಿ ತಂಡ ಬಯಲು ಮಾಡಿದೆ.
ಬಂಕ್ ಮಾಲೀಕರು ಅಳತೆಯಲ್ಲಿ ಮೋಸ ಮಾಡಿ ಗ್ರಾಹಕರನ್ನ ಲೂಟಿ ಹೊಡಿತ್ತಿದ್ದಾರೆ. ಅದು ಹೇಗೆ ಅನ್ನೋದನ್ನ ಕವರ್ಸ್ಟೋರಿ ತಂಡ ರಿಯಾಲಿಟಿ ಚೆಕ್ನಲ್ಲಿ ಪತ್ತೆಹಚ್ಚಿದೆ. ನಮ್ಮ ರಾಜ್ಯದ ಹೆಚ್ಚಿನ ಪೆಟ್ರೋಲ್ ಬಂಕ್ಗಳಲ್ಲಿ ಭರ್ಜರಿ ಮೋಸ ನಡೀತಿದೆ. ಪೆಟ್ರೋಲ್ ಬಂಕ್ನವರು ನಿಮಗೆ ಗೊತ್ತಿಲ್ಲದೇ ನಿಮ್ಮ ಜೇಬಿಗೆ ಕನ್ನ ಹಾಕಿ , ಕೊಟ್ಯಾಂತರ ರೂಪಾಯಿ ಲೂಟಿ ಮಾಡುತ್ತಿದ್ದಾರೆ.
ನಾವು ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಯ 50ಕ್ಕೂ ಹೆಚ್ಚು ಪೆಟ್ರೋಲ್ ಬಂಕ್ಗಳಿಗೆ ಭೇಟಿ ಕೊಟ್ಟು ರಹಸ್ಯ ಕಾರ್ಯಾಚರಣೆ ಮಾಡಿದ್ವಿ. ಹೆಚ್ಚಿನ ಬಂಕ್ಗಳು 5 ಲೀಟರ್ಗೆ 25 ಎಂಎಲ್ಗೂ ಹೆಚ್ಚು ಪ್ರಮಾಣದ ಇಂಧನ ಮೋಸ ಮಾಡ್ತಿರೋದು ಬೆಳಕಿಗೆ ಬಂತು.
ಈ ರೀತಿಯ ವಂಚನೆಗೆ ಮಾಪನ ಇಲಾಖೆಯ ಅಧಿಕಾರಿಗಳೇ ಅವಕಾಶ ಮಾಡಿಕೊಟ್ಟಿದ್ದಾರೆ ಅನ್ನೋದು ಬಂಕ್ ಸಿಬ್ಬಂದಿ ವಾದ. ಆದರೆ ಮಾಪನ ಅಧಿಕಾರಿಗಳು ಕೊಡೋ ಸ್ಪಷ್ಟನೆಯೇ ಬೇರೆ. ಒಟ್ಟಾರೆ ಪೆಟ್ರೋಲ್ ಬಂಕ್ಗಳು ನಾನಾ ರೀತಿಯಲ್ಲಿ ಗ್ರಾಹಕರನ್ನ ವಂಚಿಸ್ತಿದ್ದಾರೆ. ಆದರೆ ಈ ಬಗ್ಗೆ ಮಾಪನ ಇಲಾಖೆಯ ಅಧಿಕಾರಿಗಳು ಮಾತ್ರ ಬಂಕ್ ಮಾಲೀಕರು ಕೊಡೋ ಲಂಚಾ ತಿಂದು ಸೌಖ್ಯವಾಗಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ವಿಚಾರ.
ವರದಿ: ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್
