Asianet Suvarna News Asianet Suvarna News

ಅಭ್ಯರ್ಥಿ ಮೃತಪಟ್ಟರೆ ಮತ್ತೆ ಚುನಾವಣೆ ಮುಂದೂಡಲು ಕಾರಣ ಚನ್ನಗಿರಿ ..!

ನಾಮಪತ್ರ ಸಲ್ಲಿಕೆ ಪೂರ್ಣಗೊಂಡು ಪ್ರಚಾರದ ಭರಾಟೆ ತಾರಕಕ್ಕೇರಿರುವ ಸಂದರ್ಭದಲ್ಲಿ ಕಣದಲ್ಲಿರುವ ಯಾರಾದರೂ ಅಭ್ಯರ್ಥಿ ಮೃತಪಟ್ಟರೆ ಚುನಾವಣೆಯನ್ನೇ ಮುಂದೂಡಲಾಗುತ್ತದೆ.

Countermanding of poll

ಬೆಂಗಳೂರು : ನಾಮಪತ್ರ ಸಲ್ಲಿಕೆ ಪೂರ್ಣಗೊಂಡು ಪ್ರಚಾರದ ಭರಾಟೆ ತಾರಕಕ್ಕೇರಿರುವ ಸಂದರ್ಭದಲ್ಲಿ ಕಣದಲ್ಲಿರುವ ಯಾರಾದರೂ ಅಭ್ಯರ್ಥಿ ಮೃತಪಟ್ಟರೆ ಚುನಾವಣೆಯನ್ನೇ ಮುಂದೂಡಲಾಗುತ್ತದೆ.

2013ರಲ್ಲಿ ಪಿರಿಯಾಪಟ್ಟಣದಲ್ಲೂ ಇದೇ ರೀತಿ ಆಗಿತ್ತು. ಈ ಸಂಪ್ರದಾಯ ಶುರುವಾಗಿದ್ದು ಚನ್ನಗಿರಿ ಕ್ಷೇತ್ರದಿಂದ. 1957ರ ಚುನಾವಣೆಗೆ ಕಾಂಗ್ರೆಸ್ಸಿಂದ ಕುಂದೂರು ರುದ್ರಪ್ಪ, ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಎಂ.ಎಸ್. ಪಾಪಣ್ಣ ಸ್ಪರ್ಧೆ ಮಾಡಿದ್ದರು.

ಮತದಾನಕ್ಕೆ 8-10 ದಿನ ಬಾಕಿ ಇರುವಾಗ ಪಾಪಣ್ಣ ನಿಧನರಾದರು. ಹೀಗಾಗಿ ರುದ್ರಪ್ಪ ಅವಿರೋಧ ಆಯ್ಕೆಯಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ, ಅಭ್ಯರ್ಥಿ ಮೃತಪಟ್ಟರೆ ಚುನಾವಣೆ ಮುಂದೂಡುವ ಸಂಬಂಧ ನಿಯಮಕ್ಕೆ ತಿದ್ದುಪಡಿ ಮಾಡಿತು.

Follow Us:
Download App:
  • android
  • ios