ಒಳ­ಚರಂ­ಡಿ ನೀರು ಹರಿಯುತ್ತಿದ್ದ ದೃಶ್ಯವನ್ನು ಅಂಗ್ಲ ಪತ್ರಿಕೆ ವರದಿಗಾರ ಕ್ಯಾಮೆರಾದಲ್ಲಿ ಸೆರೆ ಹಿಡಿ­ಯುತ್ತಿದ್ದರು. ಅಷ್ಟೊತ್ತಿಗೆ ಅಲ್ಲಿಗೆ ಬಂದ ಹೊಯ್ಸಳ ವಾಹನದ  ಪೇದೆಯೊಬ್ಬರು ಫೋಟೋ ತೆಗೆಯ­ದಂತೆ ವರದಿಗಾರನಿಗೆ ಸೂಚಿ­ಸಿ­­ದ್ದಾರೆ.

ಬೆಂಗಳೂರು (ನ.12): ಘಟನೆಯೊಂದರ ವರದಿಗೆ ತೆರಳಿದ್ದ ಆಂಗ್ಲ ಪತ್ರಿಕೆಯ ವರದಿಗಾರನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಪೊಲೀಸ್‌ ಪೇದೆ, ಹೊಯ್ಸಳ ವಾಹನ ಚಾಲಕರೊಬ್ಬರನ್ನು ಅಮಾನತು ಮಾಡಿ ನಗರ ಪೊಲೀಸ್‌ ಆಯುಕ್ತ ಮೇಘರಿಕ್‌ ಅವರು ಆದೇಶಿಸಿದ್ದಾರೆ. ಆಲ್ಲದೆ,ಇಲಾಖಾ ತನಿಖೆಗೂ ಸೂಚಿಸಿದ್ದಾರೆ.

ಏನಾಯ್ತು?: ಶುಕ್ರವಾರ ಬಾಣಸ­ವಾಡಿ ಮುಖ್ಯರಸ್ತೆಯಲ್ಲೇ ಒಳ­ಚರಂ­ಡಿ ನೀರು ಹರಿಯುತ್ತಿದ್ದನ್ನು ಒಂದಷ್ಟುಮಂದಿ ನಿಂತು ನೋಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಅಂಗ್ಲ ಪತ್ರಿಕೆ ವರದಿಗಾರ, ಕ್ಯಾಮೆರಾದಲ್ಲಿ ದೃಶ್ಯ ಸೆರೆ ಹಿಡಿ­ ಯುತ್ತಿದ್ದರು. ಅಷ್ಟೊತ್ತಿಗೆ ಹೊಯ್ಸಳ ವಾಹನವೂ ಸ್ಥಳಕ್ಕೆ ಬಂದಿದೆ. ಈ ವೇಳೆ ಪೇದೆಯೊಬ್ಬರು ಫೋಟೋ ತೆಗೆಯ­ದಂತೆ ವರದಿಗಾರನಿಗೆ ಸೂಚಿ­ಸಿ­­ದ್ದಾರೆ.

ನಂತರ ಅಲ್ಲಿಂದ ಹೊರಡು­ತ್ತಿದ್ದ ವರ­ದಿಗಾರನನ್ನು ತಡೆದು ಪೇದೆ ಲಾಠಿ­ಯಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ವಾಹನಕ್ಕೆ ಕೂರಿಸಿಕೊಂಡು ಒಂದಷ್ಟು ದೂರ ಹೋಗಿದ್ದಾರೆ. ನಂತರ ರಸ್ತೆ ಮಧ್ಯೆ ಬಿಟ್ಟು ಹೋಗಿ­ದ್ದಾರೆ. ಘಟನೆ ಬಗ್ಗೆ ವರದಿಗಾರ ಪೂರ್ವ ವಿಭಾಗದ ಡಿಸಿಪಿ ಸತೀಶ್‌ ಅವರಿಗೆ ದೂರು ನೀಡಿದ್ದರು.