ಆರಕ್ಷಕ ವಾಹನದ ಶಬ್ದ ಕೇಳಿಸಿಕೊಂಡ ಈ ಇಬ್ಬರು ಕಳ್ಳರು ಓಡಲು ಶುರು ಮಾಡಿದ್ದಾರೆ.

ಧಾರವಾಡ(ಆ.17): ಇಲ್ಲಿನ ವಿದ್ಯಾಗಿರಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಲು ಬಂದು ಪರಾರಿಯಾಗುತ್ತಿದ್ದ ಚೋರರನ್ನು ಪೊಲೀಸರು ಸಿನೀಮಿಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.

ಪಟ್ಟಣದ ಮಹಿಷಿ ರಸ್ತೆಯಲ್ಲಿರುವ ರಶ್ಮಿ ಜೋಷಿ ಅವರ ಮನೆಗೆ ನಿನ್ನೆ ರಾತ್ರಿ 1.30 ಗಂಟೆಗೆ ಆಗಮಿಸಿದ ಇಬ್ಬರು ಕಳ್ಳರು ಮನೆಯ ಮೇಲ್ಛಾವಣಿಯಲ್ಲಿ ಅಳವಡಿಸಿದ್ದ ಸೋಲಾರ್​ ಪ್ಯಾನೆಲ್​ನಲ್ಲಿಯ ವಿದ್ಯುತ್​ ತಂತಿಯನ್ನು ಕದಿಯುತ್ತಿದ್ದಾಗ ಜಗರೂಕರಾದ ಮಾಲೀಕ ರಶ್ಮಿ ಜೋಷಿ ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಕೆಲವೇ ಕ್ಷಣದಲ್ಲಿ ಪೊಲೀಸರು ಆಗಮಿಸಿದರು. ಆರಕ್ಷಕ ವಾಹನದ ಶಬ್ದ ಕೇಳಿಸಿಕೊಂಡ ಈ ಇಬ್ಬರು ಕಳ್ಳರು ಓಡಲು ಶುರು ಮಾಡಿದ್ದಾರೆ.

ಓಡುತ್ತಾ ಹತ್ತಿರದಲ್ಲಿದ್ದ ಬಾವಿಗೆ ಜಿಗಿದಿದ್ದಾರೆ. ಬಾವಿಯೊಳಗೋದರೂ ಬಿಡದ ಪೊಲೀಸರು ಇಬ್ಬರನ್ನು ಬಂಧಿಸಿ ಸೆರೆಮನೆಗೆ ತಳ್ಳಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.