ಅಟಲ್ಗೆ ಮಂಡಿಯೂರಿ ವಂದಿಸಿದ ಸಿಂಧಿಯಾ
ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರ ವಾಜಪೇಯಿ ಅಜಾತ ಶತ್ರುವೆಂದು ಪರಿಗಣಿಸಲ್ಪಟ್ಟಿದೇ ಈ ಕಾರಣಕ್ಕೆ. ಅವರ ನಡೆ, ನುಡಿಗೆ ಎಲ್ಲರೂ ತಲೆ ಬಾಗುತ್ತಿದ್ದರು. ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಹಿರಿಯರಿಗೆ ಶಿರ ಭಾಗಿ ವಂದಿಸಿದ್ದು ಹೀಗೆ.
ನವೆದೆಹಲಿ: ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮಂಡಿಯೂರಿ ಅಂತಿಮ ನಮನ ಸಲ್ಲಿಸುವ ಮೂಲಕ ಗಮನ ಸೆಳೆದರು.
ಬಿಜೆಪಿ ಮುಖ್ಯ ಕಚೇರಿಯಲ್ಲಿ ಕಾಂಗ್ರೆಸ್ ಯುವ ಸಂಸದ ಸಿಂಧಿಯಾ ಭಾವುಕರಾಗಿ ವಾಜಪೇಯಿ ಅವರಿಗೆ ಅಂತಿಮ ನಮನ ಸಲ್ಲಿಸಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
पूर्व प्रधानमंत्री श्री अटलबिहारी वाजपेयी जी के अंतिम दर्शन कर श्रद्धांजलि अर्पित की। pic.twitter.com/zdBj9evMFW
— Jyotiraditya Scindia (@JM_Scindia) August 17, 2018
ಜ್ಯೋತಿರಾದಿತ್ಯ ಸಿಂಧಿಯಾ ಕುಟುಂಬವು ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದು, ಟ್ವೀಟರ್ನಲ್ಲಿಯೂ ಫೋಟೋವನ್ನು ಶೇರ್ ಮಾಡಿ ವಾಜಪೇಯಿ ಅಗಲಿಕೆಗೆ ಸಿಂಧಿಯಾ ಕಂಬನಿ ಮಿಡಿದಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ