ಕಲಬುರ್ಗಿ(ಅ.05): ಮನನೊಂದ ಕಂಡಕ್ಟರ್ ಬಸ್'ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ಪಟ್ಟಣದಲ್ಲಿ ನಡೆದಿದೆ.
Add Asianetnews Kannada as a Preferred Source

ಸಂಚಾರಿ ನಿರೀಕ್ಷಕನೊಬ್ಬ ಕಂಡೆಕ್ಟರ್ ಈರಣ್ಣನ(35) ಮೇಲೆ ದಂಡ ವಿಧಿಸಿದ್ದ. ಇದೇ ವಿಚಾರದಿಂದ ಮನನೊಂದುಕೊಂಡ ಈರಣ್ಣ ಕಳೆದ ರಾತ್ರಿ ಬಸ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
ಸದ್ಯ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಈ ದಾಖಲಾಗಿದೆ.
