ಮತ್ತಿಬ್ಬರು ಡಿಸಿಎಂ ನೇಮಕ ಸಿಎಂಗೆ ಬಿಟ್ಟದ್ದು: ಸವದಿ| ರಾಜ್ಯದಲ್ಲಿ ಮತ್ತಿಬ್ಬರು ಡಿಸಿಎಂ ಹುದ್ದೆ ಸೃಷ್ಟಿಸುವ ಕುರಿತು ನನಗೇನೂ ಗೊತ್ತಿಲ್ಲ

ಮೈಸೂರು[ಸೆ.09]: ಯಾರನ್ನು ಯಾವಾಗ ಉಪಮುಖ್ಯಮಂತ್ರಿ ಮಾಡಬೇಕು, ಎಷ್ಟುಉಪಮುಖ್ಯಮಂತ್ರಿಗಲನ್ನು ನೇಮಿಸಬೇಕು ಎಂಬುದು ಮುಖ್ಯಮಂತ್ರಿಗಳಿಗೆ ಬಿಟ್ಟವಿಷಯ. ರಾಜ್ಯದಲ್ಲಿ ಮತ್ತಿಬ್ಬರು ಡಿಸಿಎಂ ಹುದ್ದೆ ಸೃಷ್ಟಿಸುವ ಕುರಿತು ನನಗೇನೂ ಗೊತ್ತಿಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರನ್ನು ಡಿಸಿಎಂ ಮಾಡಬೇಕು ಎಂಬುದು ಮುಖ್ಯಮಂತ್ರಿಗಳಿಗೆ ಗೊತ್ತು. ಅದು ಅವರ ಪರಮಾಧಿಕಾರ. ಡಿಸಿಎಂ ಹುದ್ದೆ ನನಗೆ ಬಯಸದೇ ಬಂದ ಭಾಗ್ಯ ಎಂದರು.