ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತಾಡಿದ ಸಿಎಂ, ಕಾಂಗ್ರೆಸ್​​ ಶಾಸಕರು ಬಿಜೆಪಿಗೆ ಸೇರಲ್ಲ. ಈ ವಿಚಾರದಲ್ಲಿ ಯಡಿಯೂರಪ್ಪ  ಬರೀ ಸುಳ್ಳು ಹೇಳುತ್ತಿದ್ದಾರೆ ಅಂತ ಟೀಕಿಸಿದರು. ಒಂದು ಸುಳ್ಳನ್ನ 100 ಬಾರಿ ಹೇಳಿ ನಿಜ ಮಾಡುವ ಪ್ರಯತ್ನ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಮೈಸೂರು(ಅ.23): ಚುನಾವಣೆಗೆ 6 ತಿಂಗಳು ಮುನ್ನ ಕಾಂಗ್ರೆಸ್`ನ ಹಲವು ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ಯಡಿಯೂರಪ್ಪ ಹೇಳಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ಧಾರೆ. ಕಾಂಗ್ರೆಸ್​​​ನ ಯಾವ ಶಾಸಕರು ಬಿಜೆಪಿಯತ್ತ ತಲೆ ಹಾಕಿಯೂ ಮಲಗುವುದಿಲ್ಲ, ಅದೊಂದು ಭ್ರಮೆ, ಸುಳ್ಳು ಹೇಳುವುದರಲ್ಲಿ ಬಿಜಿಪಿಯವರು ನಿಸ್ಸೀಮರು ಅಂತ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತಾಡಿದ ಸಿಎಂ, ಕಾಂಗ್ರೆಸ್​​ ಶಾಸಕರು ಬಿಜೆಪಿಗೆ ಸೇರಲ್ಲ. ಈ ವಿಚಾರದಲ್ಲಿ ಯಡಿಯೂರಪ್ಪ ಬರೀ ಸುಳ್ಳು ಹೇಳುತ್ತಿದ್ದಾರೆ ಅಂತ ಟೀಕಿಸಿದರು. ಒಂದು ಸುಳ್ಳನ್ನ 100 ಬಾರಿ ಹೇಳಿ ನಿಜ ಮಾಡುವ ಪ್ರಯತ್ನ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ.