ವಿಜೇತರ ಪೈಕಿ ಹೆಚ್ಚು ಗಮನ ಸೆಳೆದಿದ್ದು, ಗ್ಯಾಂಗ್ರಿನ್​ನಿಂದಾಗಿ ಕಾಲು ಕಳೆದುಕೊಂಡಿರುವ  ಚಿತ್ರ ನಟ ಸೈಯ್ಯದ್​ ಸತ್ಯಜಿತ್​.

ಬೆಂಗಳೂರು(ನ.1): 2016ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ರಾಜ್ಯ ಸರ್ಕಾರದ ವತಿಯಿಂದ ಸಂತೋಷ ಕೂಟ ಏರ್ಪಡಿಸಲಾಗಿತ್ತು. ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ, ಸಚಿವರಾದ ಕೆ.ಜೆ. ಜಾರ್ಜ್​, ರೋಷನ್​ ಬೇಗ್​, ಉಮಾಶ್ರೀ, ಹಾಗೂ ಪ್ರಶಸ್ತಿ ವಿಜೇತರು ಪಾಲ್ಗೊಂಡಿದ್ದರು. ವಿಜೇತರ ಪೈಕಿ ಹೆಚ್ಚು ಗಮನ ಸೆಳೆದಿದ್ದು, ಗ್ಯಾಂಗ್ರಿನ್​ನಿಂದಾಗಿ ಕಾಲು ಕಳೆದುಕೊಂಡಿರುವ ಚಿತ್ರ ನಟ ಸೈಯ್ಯದ್​ ಸತ್ಯಜಿತ್​. ಸತ್ಯಜಿತ್​ ಆರೋಗ್ಯ ವಿಚಾರಿಸಿದ ಸಿಎಂ ಸಿದ್ಧರಾಮಯ್ಯ, ಚಿಕಿತ್ಸಾ ವೆಚ್ಚ ಭರಿಸಿಕೊಡುವ ಭರವಸೆ ನೀಡಿದ್ರು. ಸತ್ಯಜಿತ್​ ಅವರಿಗೆ ಚಿಕಿತ್ಸೆಗಾಗಿ ಹಣಕಾಸಿನ ತೊಂದರೆ ಉಂಟಾಗಿರುವ ಬಗ್ಗೆ ಸುವರ್ಣ ನ್ಯೂಸ್​ ವಿಸ್ತೃತ ವರದಿ ಪ್ರಸಾರ ಮಾಡಿತ್ತು.